ಬಂಟ್ವಾಳ: ಈದ್ಮಿಲಾದ್ ಮೆರವಣಿಗೆ ನಡೆಸಲು ಬಿಡಬಾರದೆಂದು ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆಯ ಹಿನ್ನೆಲೆಯಲ್ಲಿ "ತಾಕತ್ತಿದ್ದರೆ ತಡೆಯಿರಿ" ಎಂಬ ಆಡಿಯೋ ವೈರಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಶರೀಫ್, ಹಸೈನಾರ್ ಬಿ.ಸಿ.ರೋಡ್ ಬಂಧಿತ ಆರೋಪಿಗಳು.
ನಾಗಮಂಗಲ ಪ್ರಕರಣದ ಪ್ರತಿಭಟನೆಯಲ್ಲಿ ಈದ್ಮಿಲಾದ್ ಮೆರವಣಿಗೆ ನಡೆಸಲು ಬಿಡಬಾರದೆಂದು ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಶರಣ್ ಪಂಪ್ವೆಲ್ ಅವರನ್ನು ಉಲ್ಲೇಖಿಸಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಮೊಬೈಲ್ ಆಡಿಯೋ ಮಾಡಿದ್ದ. ಈ ಆಡಿಯೋ ಸಾಕಷ್ಟು ವೈರಲ್ ಆಗಿತ್ತು. ಆದ್ದರಿಂದ ಮಹಮ್ಮದ್ ಶರೀಫ್ ನನ್ನು ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಆಡಿಯೋ ವೈರಲ್ ಮಾಡಿರುವ ಹಸೈನಾರ್ ಬಿ.ಸಿ.ರೋಡ್ನನ್ನು ಪೊಲೀಸರು ಬಂಧಿಸಿದ್ದಾರೆ.
Kshetra Samachara
16/09/2024 05:22 pm