ಧಾರವಾಡ: ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡಿಕೊಳ್ಳುವ ಈ ಕಾಲಘಟ್ಟದಲ್ಲಿ ಧಾರವಾಡದ ಮುಸ್ಲಿಂರು ರಕ್ತದಾನ ಮಾಡುವ ಮುಖಾಂತರ ವಿಶಿಷ್ಟವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಮಾದರಿ ಎನಿಸಿಕೊಂಡಿದ್ದಾರೆ.
ಹೌದು! ಧಾರವಾಡದ ತೇಜಸ್ವಿನಗರದ ಮಸೀದಿಯಲ್ಲಿ ಮುಸ್ಲಿಂರು ರಕ್ತದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಜಾತಿ, ಧರ್ಮ ಎನ್ನುವುದು ಕೇವಲ ಆಚರಣೆಗೆ ಮಾತ್ರ ಸೀಮಿತ. ಮನುಷ್ಯನ ದೇಹದಲ್ಲಿ ಹರಿಯುತ್ತಿರುವ ರಕ್ತ ಮಾತ್ರ ಒಂದೇ ಬಣ್ಣ ಹೊಂದಿದೆ ಎಂಬುದನ್ನು ಸಾಬೀತು ಮಾಡುವ ಮುಖಾಂತರ ರಕ್ತದ ಕೊರತೆ ಇರುವವರಿಗೆ ಮುಸ್ಲಿಂರು ರಕ್ತದಾನ ಮಾಡುವ ಮುಖಾಂತರ ಈದ್ ಮಿಲಾದ್ ಹಬ್ಬಕ್ಕೆ ನಿಜವಾದ ಅರ್ಥ ತಂದು ಕೊಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/09/2024 04:49 pm