ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಶೆಟ್ಟರ್ ವಿರುದ್ಧ ಸಚಿವ ಎಚ್.ಕೆ.ಪಾಟೀಲ್ ತಿರುಗೇಟು - ಬಿಜೆಪಿಯವರ ಮನಸ್ಥಿತಿ ಹೇಗಿದೆ ಅಂತ ಅರ್ಥವಾಗುತ್ತೇ!

ಹುಬ್ಬಳ್ಳಿ : ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ಸಚಿವ ಎಚ್. ಕೆ. ಪಾಟೀಲ್ ತಿರುಗೇಟು ನೀಡಿದ್ದು, ಮುನಿರತ್ನ, ಪ್ರಕರಣಗಳ ಬೆಂಬಲಿಸೋ ಮನಸ್ಥಿತಿ ಇವರಿಗೆ ಹೇಗೆ ಬರುತ್ತೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜಿಗಜಿಣಗಿ ಅವರು ಏನ್ ಹೇಳಿದರು ಅಂತಾ ಶೆಟ್ಟರ ಕೇಳಲಿ. ಹೆಣ್ಣು ಮಕ್ಕಳನ್ನು ಕನಿಷ್ಠವಾಗಿ ನೋಡುವ ವ್ಯಕ್ತಿಗೆ ಇವರ ಬೆಂಬಲ ಎಷ್ಟು ಸರಿ..? ಬಿಜೆಪಿಯವರೇ ಮುನಿರತ್ನವರಿಗೆ ಸೋಕಾಸ್ ನೋಟಿಸ್ ನೀಡಿದ್ದಾರೆ.ಮುನಿರತ್ನ ತಪ್ಪೇ ಮಾಡಿಲ್ಲ ಅಂದ್ರೆ ನೋಟಿಸ್ ನೀಡಿದ್ದು ಯಾಕೆ...? ಎಂದು ಪ್ರಶ್ನಿಸಿದರು.

ಬಿಜೆಪಿ ಎಂಪಿಗಳೇ ಕೆಲವರು ಮುನಿರತ್ನ ನಡೆ ಖಂಡಿಸುತ್ತಿದ್ದಾರೆ. ಮುನಿರತ್ನ ರಕ್ಷಣೆಗೆ ನಿಲ್ಲುವವರ ಉದ್ದೇಶವಾದ್ರೂ ಏನೂ..? ಸತ್ಯ ಹೊರಬರಬೇಕು ಅನ್ನೋದು ಎಲ್ಲರು ಒತ್ತಾಯ. ಆದರೆ ಕಣ್ಮುಂದೆ ಸತ್ಯ ಇರುವಾಗ ಇಂತವರ ಬೆಂಬಲಕ್ಕೆ ನಿಲ್ಲುವುದು ಎಷ್ಟು ಸರಿ ಎಂದರು.

ಮುಡಾ ಹಗರಣದಲ್ಲಿ 17 ಎ ಕೆಳಗಡೆ ರಾಜ್ಯಪಾಲರು ಪರವಾನಿಗೆ ನೀಡಿದ್ದಾರೆ. ಅದನ್ನು ನಾವು ಪಶ್ನೆ ಮಾಡಿದ್ದೇವೆ. ಮುಡಾ ಕುರಿತು ನಾವು ಪ್ರಶ್ನೆ ಮಾಡಿರುವುದನ್ನು ಶೆಟ್ಟರ್ ಸರಿಯಾಗಿ ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 02:33 pm

Cinque Terre

44.51 K

Cinque Terre

5

ಸಂಬಂಧಿತ ಸುದ್ದಿ