ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುಂಡಿ ಮುಚ್ಚುವ ಕೆಲಸದಲ್ಲಿದ್ದ ಅಧಿಕಾರಿಗಳನ್ನು ಸುತ್ತುವರೆದ ಸ್ಥಳೀಯರು

ಬೆಂಗಳೂರು: ದಾಸರಹಳ್ಳಿ ವಲಯದಲ್ಲಿ ಗುಂಡಿ ಮುಚ್ಚುವ ಕೆಲಸದಲ್ಲಿ ಪಾಲಿಕೆ ಅಧಿಕಾರಿಗಳು ನಿರತರಾಗಿದ್ದಾರೆ. ಗುಂಡಿ ಮುಚ್ಚಲು ಬಂದ ಅಧಿಕಾರಿಗಳ ಸ್ಥಳೀಯರು ಸುತ್ತುವರೆದ ಪ್ರಸಂಗ ನಡೆದಿದೆ. ಏನೋ ಮಾಡಿ ಗುಂಡಿ ಮುಚ್ಚಿ ಕೊಡಿ ಅಂತ ಸ್ಥಳೀಯರು ಆಗ್ರಹಿಸಿದ್ದು ಅಧಿಕಾರಿಗಳಿಗೆ ಸ್ಥಳೀಯರು ಕೈ ಮುಗಿದಿದ್ದಾರೆ.

ಜಾಲಹಳ್ಲಿ ಕ್ರಾಸ್, ಗಂಗಮ್ಮನಗುಡಿ ಬಳಿ ಘಟನೆ ನಡೆದಿದ್ದು

ಅಯ್ಯಪ್ಪ ಟೆಂಪಲ್ ರಸ್ತೆಯಲ್ಲಿ ಓಡಾಡೋಕೆ ಆಗಲ್ಲ. ಡಿ.ಕೆ ಶಿವಕುಮಾರ್ ಹೇಳಿದ ಮೇಲಾದರೂ ಮುಚ್ಚಿಕೊಡಿ ಎಂದು

ಅಧಿಕಾರಿಗಳಿಗೆ ಸ್ಥಳೀಯರು ಅಹವಾಲು ಕೊಟ್ಟಿದ್ದಾರೆ. ಸುಬ್ರೋತ್ ಮುಖರ್ಜಿ ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು. ಕೆಲವು ಮುಚ್ಚಿದ್ದೇವೆ ಉಳಿದಿದ್ದು ಇವತ್ತು ಮುಚ್ತೇವೆ ಅಂತ ಅಧಿಕಾರಿಗಳು ಸಮಜಾಯಿಷಿ ಕೊಟ್ಟ ಘಟನೆ ನಡೆದಿದೆ.

Edited By : Vinayak Patil
PublicNext

PublicNext

15/09/2024 04:04 pm

Cinque Terre

18.03 K

Cinque Terre

0

ಸಂಬಂಧಿತ ಸುದ್ದಿ