ಬೆಂಗಳೂರು: ಇಂದು ಎಲ್ಲೆಡೆ ಗೌರಿಗಣೇಶ ಹಬ್ಬದ ಆಚರಣೆ ಮುಗಿಲು ಮುಟ್ಟಿದೆ. ಅದರಲ್ಲೂ ವಿಶೇಷವಾಗಿ ಗೌರಿ ಹಬ್ಬ ಮಹಿಳೆಯರಿಗೆ ಅತ್ಯಂತ ಪ್ರಿಯವಾದದ್ದು. ಇದೇ ವೇಳೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರ ಮನೆಯಲ್ಲಿ ವಿಶೇಷ ಗೌರಿ ಪೂಜೆ ಆಯೋಜಿಸಿದ್ದು, ಗೌರಿ ಪೂಜೆಯಲ್ಲಿ ನಟಿ ತಾರಾ, ಮಾಳವಿಕಾ ಹಾಗೂ ಸುಧಾಮೂರ್ತಿ ಭಾಗಿಯಾಗಿದ್ದರು.
ಬಳಿಕ, ಪೂಜೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ದೇವರ ಹಾಡು ಹಾಡಿ, ಬಾಗಿನ ಅರ್ಪಣೆ ಮಾಡಿಕೊಂಡರು. ಇನ್ನು ಸುದ್ದಿಗಾರರೊಂದಿಗೆ ಶಾಸಕರು ಮಾತನಾಡಿ, ನಾಡಿನ ಸಮಸ್ತ ಜನರಿಗೂ ಹಬ್ಬದ ಶುಭಾಶಯ ಕೋರಿದರು.
PublicNext
06/09/2024 07:40 pm