ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅವಶ್ಯವಿರುವ ಸಲಕರಣೆ ನೀಡುವಲ್ಲಿ ವಿಫಲವಾದ ಶಿಬಿರ

ನವಲಗುಂದ: ಕಷ್ಟ ಪಟ್ಟು ನೆರೆಹೊರೆಯವರ ಸಹಾಯ ಪಡೆದು ಆಸ್ಪತ್ರೆಗೆ ಬಂದರೆ ವೈದ್ಯರ ಬಳಿ ಹೋಗಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ವಿಶೇಷಚೇತನ ಹಾಗೂ ಹಿರಿಯ ನಾಗರಿಕರು ಹರಸಾಹಸ ಪಡುವ ಸ್ಥಿತಿ ಬಂದೊದಗಿದೆ.

ಹೌದು...ಈ ದೃಶ್ಯ ಕಂಡುಬಂದಿದ್ದು, ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಇಂದು ವಿಶೇಷಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳ ಅಳತೆ ಮತ್ತು ಮೌಲ್ಯಮಾಪನ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಆದರೆ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಈ ಶಿಬಿರ ಇರುವದರಿಂದ ಮೆಟ್ಟಿಲು ಹತ್ತಿ ಹೋಗಬೇಕಾದ ಪರಿಸ್ಥಿತಿ ಇವರದ್ದಾಗಿದೆ. ಇನ್ನೂ ಬೆಳಿಗ್ಗೆಯಿಂದ ಜನಜಂಗುಳಿ ನೋಡತೀರದು, ನಮಗೆ ಅವಶ್ಯವಿರುವ ಸಲಕರಣೆ ನೀಡುತ್ತಿಲ್ಲ ಅಲ್ಲದೇ ಕೆಳಗಡೆ ವ್ಯವಸ್ಥೆ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂಬುದು ವಿಶೇಷಚೇತನರ ಮಾತು.

- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

Edited By : Suman K
Kshetra Samachara

Kshetra Samachara

20/07/2024 04:18 pm

Cinque Terre

25.39 K

Cinque Terre

0

ಸಂಬಂಧಿತ ಸುದ್ದಿ