ಕೆಜಿಎಫ್ : ಗಡಿನಾಡು ಕೆಜಿಎಫ್ ನಲ್ಲಿ ಕನ್ನಡದ ಕೆಲಸಕ್ಕೆ ನನ್ನ ಸಹಕಾರ ನಿರಂತರವಾಗಿ ಮುಂದುವರೆಯಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ತಮ್ಮ ನಿವಾಸದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳಿಂದ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು,.
ಆಂಧ್ರ ಮತ್ತು ತಮಿಳುನಾಡು ಗಡಿಭಾಗದಲ್ಲಿದ್ದರೂ ಕೆಜಿಎಫ್ ತಾಲೂಕು ಕನ್ನಡಮಯವಾಗಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕನ್ನಡ ಕೆಲಸವಾಗಲಿ ನಿಮ್ಮ ಜೊತೆ ಇರುತ್ತೆನೆ ಹಾಗೂ ಕ್ಷೇತ್ರದಲ್ಲಿ ಪರಭಾಷಿಕರನ್ನು ನಮ್ಮ ಅಣ್ಣ ತಮ್ಮಂದಿರ ರೀತಿ ಸೋತರತ್ವ ಬಾಂಧವ್ಯದಲ್ಲಿ ಕಾಣೋಣ ಎಂದರು. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಕೆಜಿಎಫ್ ನಲ್ಲಿ ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಂದು ಹೇಳಿದರು.
Kshetra Samachara
20/10/2024 09:35 pm