ಹಾವೇರಿ : ಇಂದು ರಾತ್ರಿ ಅಥವಾ ನಾಳೆ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಂತಿಮವಾಗಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಸಿಇಸಿ ಮೀಟಿಂಗ್ ಪ್ರಾರಂಭವಾಗಿದೆ. ನಾಳೆ ಸಂಜೆ ಹೊತ್ತಿಗೆ ನಮ್ಮ ಅಭ್ಯರ್ಥಿ ಯಾರು ಎಂಬುದರ ಅಂತಿಮ ನಿರ್ಣಯ ಆಗಲಿದೆ ಎಂದು ತಿಳಿಸಿದರು.
ನಾವು ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುತ್ತೇವೆ. ಹೈಕಮಾಂಡ್ ನವರಿಗೆ ನಮ್ಮ ಎಲ್ಲಾ ಅಭಿಪ್ರಾಯ ತಿಳಿಸಿದ್ದೇವೆ. ನಾಳೆ ಸಂಜೆ ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಪಾಟೀಲ್ ತಿಳಿಸಿದರು.
ಕಾರ್ಯಕರ್ತರ ಅಭಿಪ್ರಾಯ, ನಾಯಕರ ಶಿಫಾರಸ್ಸು ಹಾಗೂ ಶಾಸಕರ ಅಭಿಪ್ರಾಯ ಗಮನಿಸಿ ಟಿಕೆಟ್ ಕೊಡುತ್ತಾರೆ. ಎಲ್ಲರಿಗೂ ಒಪ್ಪಿತ ಆಗುವವನು, ಗೆಲ್ಲುವ ಅವಕಾಶ ಇರುವವನೆ ಅಭ್ಯರ್ಥಿ ಆಗುತ್ತಾನೆ ಎಂದು ಪಾಟೀಲ್ ತಿಳಿಸಿದರು. ಕೇಂದ್ರ ಸರ್ಕಾರ ಇಡಿ ಸಿಬಿಐ ದುರ್ಬಳಿಕೆ ಮಾಡಿಕೊಳ್ಳುತ್ತಿದೆ ಎಂದು ಪಾಟೀಲ್ ಆರೋಪಿಸಿದರು.
PublicNext
20/10/2024 05:42 pm