ಹಾವೇರಿ: ನಮ್ಮ ನಾಯಕರು, ಹಿರಿಯರು, ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದಾರೆ. ಅವರ ಆಣತಿಯಂತೆ ಸ್ಪರ್ಧಿಸುತ್ತಿದ್ದೇನೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ತಿಳಿಸಿದ್ದಾರೆ.
ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಈ ಅವಕಾಶ ಸಿಕ್ಕಿದೆ ಅಂದರೆ ನಮ್ಮ ತಂದೆ- ತಾಯಿ ಆಶೀರ್ವಾದ ಇದೆ ಎಂದು ತಿಳಿಸಿದರು.
ಶಿಗ್ಗಾಂವಿ ಸವಣೂರು ಜನರ ಪ್ರೀತಿ ನೋಡಿದ್ದೇನೆ. ಸಮಾಜಸೇವೆ ಅವಕಾಶ ಸಿಕ್ಕಿದೆ ಎಂದು ಭರತ್ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದರು.
ನಾನು 2018ರಲ್ಲಿ ಚುನಾವಣೆಯಲ್ಲಿ ಹಾಗೂ 2023ರ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದೆನೆ. ನನ್ನ ಓಟರ್ ಐಡಿ ಬಂದಾಗಿನಿಂದಲೂ ಇಲ್ಲಿ ಮತದಾನ ಮಾಡಿದ್ದೇನೆ ಎಂದು ಭರತ್ ಬೊಮ್ಮಾಯಿ ತಿಳಿಸಿದರು.
PublicNext
21/10/2024 06:44 pm