", "articleSection": "Government,Agriculture", "image": { "@type": "ImageObject", "url": "https://prod.cdn.publicnext.com/s3fs-public/418299-1737717702-havali.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಮಾರುಕಟ್ಟೆ ಬಂದ್ ಪ್ರತಿಭಟನೆ ಮಾಡಿದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ...Read more" } ", "keywords": ",Gadag,Government,Agriculture", "url": "https://publicnext.com/article/nid/Gadag/Government/Agriculture" } ಗದಗ: "ನಮ್ಮ ಬೇಡಿಕೆ ಈಡೇರಿಸಿ"- ರೈತರಿಂದ ಕೃಷಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: "ನಮ್ಮ ಬೇಡಿಕೆ ಈಡೇರಿಸಿ"- ರೈತರಿಂದ ಕೃಷಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ

ಗದಗ: ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೃಷಿ ಮಾರುಕಟ್ಟೆ ಬಂದ್ ಪ್ರತಿಭಟನೆ ಮಾಡಿದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದಿದೆ.

ಗಜೇಂದ್ರಗಡ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಶೇಂಗಾ ಬೆಳೆಗಾರರಿದ್ದು, ಬೆಲೆ ಕಲುಷಿತವಾಗಿದೆ. ಶೇಂಗಾ ಬೆಳೆಗೆ 6,785 ರೂಪಾಯಿ ಬೆಂಬಲ ಬೆಲೆ ನೀಡಬೇಕು. ಬೆಳೆಗೆ ಖರೀದಿ ಕೇಂದ್ರ ಆರಂಭ ಮಾಡಬೇಕು. ಶೇಂಗಾ ಬೆಳೆಯನ್ನು ಕೇಂದ್ರ ಸರ್ಕಾರದಿಂದ ರಪ್ತು ಮಾಡಬೇಕು. ದಲ್ಲಾಳಿ ಹಾವಳಿ ತಪ್ಪಿಸಿ, ಎಪಿಎಂಸಿ ವ್ಯವಸ್ಥೆ ಸುಧಾರಿಸಬೇಕು.

ಹೀಗೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದರು. ಇಂದು ಎಪಿಎಂಸಿ ಆವರಣ ಎಲ್ಲಾ ಅಂಗಡಿಗಳು, ವ್ಯಾಪಾರ ವಹಿವಾಟು ಬಂದ್ ಮಾಡಿದರು. ಎಪಿಎಂಸಿ ಎರಡು ಗೇಟ್ ಬಂದ್ ಮಾಡಿ, ಗೇಟ್ ಬಳಿ ಧರಣಿ ನಡೆಸಿದರು.

ಬೆಳಿಗ್ಗೆಯಿಂದ ಸಾಯಂಕಾಲ ವರೆಗೆ ಕೃಷಿ ಮಾರುಕಟ್ಟೆ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಅನೇಕ ರೈತಪರ ಹಾಗೂ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದರು.

Edited By : Ashok M
PublicNext

PublicNext

24/01/2025 04:51 pm

Cinque Terre

22.52 K

Cinque Terre

0

ಸಂಬಂಧಿತ ಸುದ್ದಿ