ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ನೈತಿಕತೆ ಇದ್ದರೆ ಸಿದ್ದರಾಮಯ್ಯ, ಖರ್ಗೆ ರಾಜೀನಾಮೆಗೆ ಯತ್ನಾಳ ಆಗ್ರಹ

ವಿಜಯಪುರ: ಇಡೀ ದೇಶದಲ್ಲಿ ಎಐಐಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೀನಿಯರ್. ಹೀಗಿದ್ದರೂ ಅವರು ದಿನದಿಂದ ದಿನಕ್ಕೆ ಹಾದಿ ಬಿಟ್ಟು ಮಾತನಾಡುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂದರೆ ಭಯೋತ್ಪಾದಕರ ಪಕ್ಷ ಎನ್ನುತ್ತಾರೆ. ಹಾಗಾದರೆ ನಾನು ಕಾಂಗ್ರೆಸ್ ಜಿಹಾದಿಗಳ ಪಕ್ಷ, ಜಿಹಾದಿಗಳನ್ನು ಸಾಕುವ ಪಕ್ಷ ಎನ್ನುತ್ತೇನೆ. ಇಂದು ಅವರು ಸಿದ್ದರಾಮಯ್ಯ ಅವರು ವಾಪಸ್ ಕೊಟ್ಟರು, ಮಲ್ಲಿಕಾರ್ಜುನ ಖರ್ಗೆ ಸಾಹೇಬ್ರ ನಿವ್ಯಾಕೆ ವಾಪಸ್ ಕೊಟ್ಟಿರಿ? ತಪ್ಪು ಮಾಡಿರಿ ಅಂತಾಯಿತಲ್ಲ. ಖರ್ಗೆ ಸಾಹೇಬ್ರು ಯಾಕೆ ಲ್ಯಾಂಡ್ ವಾಪಸ್ ಕೊಟ್ಟರು. ಉಸ್ತುವಾರಿ ಸಚಿವರು ತಿಳಿಸಲಿ. ಫಸ್ಟ್ ಲೈನ್ ಲೀಡರ್ ಎಲ್ಲರದ್ದು ತನಿಖೆ ಆಗಲಿ. ಬಹಳಷ್ಟು ಜನ ಸರ್ಕಾರಿ ಆಸ್ತಿ ಗುಳುಂ ಮಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಖರ್ಗೆ ಅವರಿಗೆ ನೈತಿಕತೆ ಇದ್ದರೆ ಇಬ್ಬರೂ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.

Edited By : Vinayak Patil
PublicNext

PublicNext

14/10/2024 07:40 pm

Cinque Terre

31.97 K

Cinque Terre

2

ಸಂಬಂಧಿತ ಸುದ್ದಿ