ವಿಜಯಪುರ: ಕಾಂಗ್ರೆಸ್ ಪಕ್ಷ ಹಿಂದೂಗಳನ್ನೂ ಗೌರವಿಸುತ್ತೆ, ಪ್ರೋತ್ಸಾಹಿಸುತ್ತೆ. ಎಲ್ಲಾ ಧರ್ಮ, ಜಾತಿಯವರನ್ನು ಕಾಂಗ್ರೆಸ್ ಗೌರವಿಸುತ್ತೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಲಾಲ್, ಹಿಜಾಬ್ ಎಂದೆಲ್ಲಾ ಮಾಡಿದ್ರಲ್ಲ! ಇದು ಗಲಾಟೆಗೆ ಪ್ರೋತ್ಸಾಹ ಕೊಡುವಂತಹದಲ್ವಾ? ಕಾಂಗ್ರೆಸ್ ಎಲ್ಲಾ ಧರ್ಮ, ಜಾತಿಯವರನ್ನೂ ಗೌರವಿಸುತ್ತದೆ, ರಕ್ಷಣೆ ಮಾಡುತ್ತದೆ. ಬಿಜೆಪಿಯವರ ತರಹ ಒಡೆದು ಆಳುವ ನೀತಿ ನಾವು ಮಾಡಲ್ಲ ಎಂದರು.
PublicNext
14/10/2024 07:25 pm