ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆಗೆ ರೈತರ ವಿರೋಧ - ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ

ಬೆಳಗಾವಿ: ಬೆಳಗಾವಿಯಲ್ಲಿ ಹಲಗಾ-ಮಚ್ಛೆ ಬೈಪಾಸ್ ರೈತರ ವಿರೋಧ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕೊಹೊಳಿ ನೇತೃತ್ವದಲ್ಲಿ ರೈತರೊಂದಿಗೆ ಮಹತ್ವದ ಸಭೆ ನಡೆಸಲಾಗಿದೆ.

ರೈತರ ವಿರೋಧದ ನಡುವೆಯೂ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿ ಮಾಡುವ ಪ್ರದೇಶದ ಗ್ಯಾಜೆಟ್ ನ್ನೇ ಬದಲಾವಣೆ ಮಾಡಲಾಗಿದೆ. ಫಲವತ್ತಾದ ಜಮೀನಿನಲ್ಲಿ ರಸ್ತೆ ನಿರ್ಮಿಸದಂತೆ ಸಚಿವ ಸತೀಶ್ ಜಾರಕೊಹೊಳಿಗೆ ರೈತರ ಒತ್ತಾಯ ಮಾಡಿದ್ದಾರೆ. ಈವರೆಗೆ ಸ್ಥಳೀಯ ರೈತರ ಅಭಿಪ್ರಾಯ ಸಂಗ್ರಹ ಮಾಡಿಲ್ಲ, ಪೊಲೀಸ್ ಪೋರ್ಸ್ ಬಳಿಸಿ ಕಾಮಗಾರಿ ಮಾಡುತ್ತಿದ್ದಾರೆ. ಹಲಗಾ ಮತ್ತು ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸಬೇಕು ಎಂದು ರೈತರ ಆಗ್ರಹಿಸಿದ್ದಾರೆ.

ಸಭೆಯಲ್ಲಿ ಶಾಸಕ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ರೈತ ಮುಖಂಡ ರಾಜು‌ ಮರವೆ, ಎಂಇಎಸ್ ಮುಖಂಡ, ಶ್ರೀರಾಮಸೇನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಭಾಗಿಯಾಗಿದ್ದರು.

Edited By : Vinayak Patil
PublicNext

PublicNext

22/10/2024 03:39 pm

Cinque Terre

13.38 K

Cinque Terre

0

ಸಂಬಂಧಿತ ಸುದ್ದಿ