ಶಿವಮೊಗ್ಗ: ನಿನ್ನೆ ಶಿವಮೊಗ್ಗದಲ್ಲಿ ನಡೆದ ಮ್ಯಾಮ್ ಕೋಸ್ ಚುನಾವಣೆಯಲ್ಲಿ ಸಹಕಾರ ಭಾರತಿಯ 19 ಜನರನ್ನ ಅತ್ಯಂತ ಲೀಡ್ ನಿಂದ ಗೆಲ್ಲಿಸಿದ ಮತದಾರರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಿವಮೊಗ್ಗದಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾಮ್ ಕೋಸ್ ನಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳನ್ನ ಗೆಲ್ಲಿಸುವ ಮೂಲಕ ಅಡಿಕೆ ಗೆದ್ದಿದೆ. ನಿಮ್ಮೆಲ್ಲರ ಕೃಪೆಯಿಂದ ಅಡಿಕೆಗೆ ಮತ್ತಷ್ಟು ಶಕ್ತಿ ತರುವ ಕೆಲಸ ಈ ಮ್ಯಾಮ್ ಕೋಸ್ ತಂಡ ಮಾಡುತ್ತದೆ. ಅಡಿಕೆ ಬೆಳೆಗಾರರ ಹಿತವನ್ನ ಗಮನಿಸಿ, ಎಲ್ಲಾ ರೀತಿಯಲ್ಲಿ ಕೂಡ ಪ್ರಯತ್ನ ಮಾಡುತ್ತೇವೆ ಎಂದರು.
PublicNext
05/02/2025 08:22 pm