ಚಿಕ್ಕಮಗಳೂರು: ಕಾಡಾನೆಗಳು ನಾಡಿಗೆ ಬಂದು ಉಪಟಳ ನೀಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಚಿಕ್ಕಮಗಳೂರು ಡಿಎಫ್ಓ ರಮೇಶ್ ಬಾಬು ತಿಳಿಸಿದ್ದಾರೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಸಾಗುವಾನೆ ಮರವನ್ನು ಬೆಳೆಯಲಾಗುತ್ತಿದೆ. ಈ ಮರದ ತೊಗಟೆಯನ್ನು ಆನೆಗಳು ಹೆಚ್ಚಾಗಿ ತಿನ್ನುತ್ತವೆ.
ಹೀಗಾಗಿ 25 ಸಾವಿರ ಎಕರೆ ಪ್ರದೇಶದಲ್ಲಿ ಸಾಗುವಾನಿ ಬೆಳೆಯಲಾಗಿದ್ದು. ನಂತರದಲ್ಲಿ ಆನೆಗಳು ತಿನ್ನುವ ಬಿದಿರು, ಕಾಡುಬೆಂಡೆ, ತಡಸಲು ಬೆಳೆಯಲಾಗಿದೆ ಇದರಿಂದ ಕಾಡುಬಿಟ್ಟು ನಾಡಿಗೆ ಬಾರದ 350-400 ಆನೆಗಳಿಗೆ ಆಹಾರ ಸಿಗುತ್ತಿದೆ ಎಂದು ಡಿಎಫ್ಓ ರಮೇಶ್ ಬಾಬು ತಿಳಿಸಿದರು.
Kshetra Samachara
04/02/2025 04:57 pm