ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ತಡರಾತ್ರಿ ಅನಾರೋಗ್ಯ - ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಣಿಪಾಲ: ಹೆತ್ತವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಗುವಿಗೆ ತಡರಾತ್ರಿ ಅನಾರೋಗ್ಯದಿಂದ ಗಂಭೀರ ಸ್ಥಿತಿ ಎದುರಾಗಿದ್ದು, ತಕ್ಷಣ ಮಗುವನ್ನು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.

ಕೇರಳ ರಾಜ್ಯದ ಆಲಪ್ಪಿಯ ದಂಪತಿ, ಮಗುವಿನೊಂದಿಗೆ ನೇತ್ರಾವತಿ ಏಕ್ಸ್‌ಪ್ರೆಸ್ ರೈಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಇಂದ್ರಾಳಿಯ ರೈಲು ನಿಲುಗಡೆ ಬಂದಾಗ ರಾತ್ರಿ 12 ಗಂಟೆ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಲಕ್ಷಣಗಳು ಕಂಡುಬಂದವು. ಈ ಸಂದರ್ಭದಲ್ಲಿ ದಂಪತಿ ಅಸಹಾಯಕರಾಗಿದ್ದರು. ನೆರವಿಗೆ ಬಂದ ನಿಲ್ದಾಣ ನಿಯಂತ್ರಕರು, ಮಗುವಿನ ರಕ್ಷಣೆಗೆ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಮಗು ಅಪಾಯದಿಂದ ಪಾರಾಗಿದ್ದಾಗಿ ತಿಳಿದುಬಂದಿದೆ.

Edited By : Somashekar
PublicNext

PublicNext

04/02/2025 03:28 pm

Cinque Terre

21.28 K

Cinque Terre

0

ಸಂಬಂಧಿತ ಸುದ್ದಿ