ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಬಿಎಂಪಿ ಕಸದಲ್ಲಿಯೂ ಕೋಟಿ ಕೋಟಿ ಲೂಟಿ : ದಿನೇಶ್ ಗುಂಡೂರಾವ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು : ಬಿಜೆಪಿ ನಾಯಕ ಎನ್.ಆರ್. ರಮೇಶ್ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 27 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಲೆಕ್ಕವಾದರೆ, ಇತ್ತ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ತ್ಯಾಜ್ಯ ವಿಲೇವಾರಿಯನ್ನು 3 ಪಾಳಿ ಅಂದರೆ 3 ಶಿಫ್ಟ್‌ ಮೂಲಕ ಮಾಡುತ್ತಿದ್ದಾರೆ.

ಈ ಮೂಲಕ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ ಎನ್.ಆರ್. ರಮೇಶ್. ಈ ಬಗ್ಗೆ ಸೂಕ್ತ ತನಿಖೆಗೂ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆಯ ವಿಶೇಷ ಆಯುಕ್ತರಾಗಲೀ, ಮುಖ್ಯ ಅಭಿಯಂತರರಾಗಲೀ, ಅಧೀಕ್ಷಕ ಅಭಿಯಂತರರಾಗಲೀ ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಲೀ ನಿಜಕ್ಕೂ ಮಧ್ಯಾಹ್ನದ ಪಾಳಿ ಮತ್ತು ರಾತ್ರಿಯ ಪಾಳಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದೆಯೇ? ಇಲ್ಲವೇ ? ಎಂಬ ಸತ್ಯವನ್ನು ಖುದ್ದಾಗಿ ಪರಿಶೀಲನೆ ಮಾಡದೆಯೇ, ವಂಚಕರು ಸೃಷ್ಟಿಸುತ್ತಿರುವ ನಕಲಿ ದಾಖಲೆಗಳಿಗೆ ಅನುಮೋದನೆಯನ್ನು ನೀಡಿ ಕೋಟ್ಯಾಂತರ ರೂಪಾಯಿ ಹಣವನ್ನು ಪ್ರತೀ ತಿಂಗಳು ಬಿಡುಗಡೆ ಮಾಡುತ್ತಿದ್ದಾರ ಎಂದು ಎನ್‌ಆರ್‌ ರಮೇಶ್‌ ಆರೋಪಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

03/02/2025 02:27 pm

Cinque Terre

4.95 K

Cinque Terre

0

ಸಂಬಂಧಿತ ಸುದ್ದಿ