ಮಂಡ್ಯ : ಪೋಲಿಸರ ಅಡ್ಡಿ, ಅಡೆತಡೆ ನಡುವೆಯೂ ಮಂಡ್ಯದ ಕೆರಗೋಡಿನಲ್ಲಿ ಕರಾಳ ದಿನ ಅಂಗವಾಗಿ ಪಂಜಿನ ಮೆರವಣಿಗೆ ಯಶಸ್ವಿಯಾಗಿ ನಡೆಸಲಾಯಿತು.
ಗ್ರಾಮದಲ್ಲಿ ಬೃಹತ್ ಧ್ವಜಸ್ಥಂಭದಲ್ಲಿ ಹಾರಿಸಲಾಗಿದ್ದ ದೊಡ್ಡ ಹನುಮಜ ಧ್ವಜವನ್ನು ಇಳಿಸಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆ ಈ ದಿನವನ್ನ ಕರಾಳ ದಿನವಾಗಿ ಆಚರಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪುನೀತ್ ಕೆರಳ್ಳಿಗೆ ಕೆರಗೊಡುವ ಪ್ರವೇಶಕ್ಕೆ ಪೊಲೀಸ್ ಅಡ್ಡಿಪಡಿಸಿದ ಹಿನ್ನಲೆ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆ ಸ್ಥಳದಿಂದ ಪಂಜಿನ ಮೆರವಣಿಗೆಯನ್ನ ಪ್ರಾರಂಭಿಸಿ ಧ್ವಜಸ್ಥಂಭದ ಬಳಿ ಬಂದು ಅಲ್ಲಿ ಸೇರಿದ ಹಿಂದೂ ಬಾಂಧವರು ದೀಪ ಹಚ್ಚಿ ಹನುಧ್ವಜವನ್ನು ಮತ್ತೆ ಹಾರಿಸುವ ಶಪಥ ಮಾಡಿದ್ರು.
Kshetra Samachara
28/01/2025 10:55 pm