ಚಾಮರಾಜನಗರ : ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ 23 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 1,38,16,000 ರೂ. ಮೌಲ್ಯದ 414.299 ಕೆ.ಜಿ ಗಾಂಜಾವನ್ನು ನಾಶಪಡಿಸಲಾಯಿತು.
ಮೈಸೂರು ಜಿಲ್ಲಾ ವ್ಯಾಪ್ತಿಯ ಜಯಪುರ ಹೋಬಳಿಯ ಗುಚ್ಚೇಗೌಡನಪುರ ಗ್ರಾಮದಲ್ಲಿರುವ ಕುಲುಮೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ ನೇತೃತ್ವದಲ್ಲಿ ಮಾದಕ ವಸ್ತುಗಳನ್ನು ನಿಯಮಾನುಸಾರ ಕುಲುಮೆಯಲ್ಲಿ ಬೆಂಕಿಗೆ ಹಾಕಿ ಸಂಪೂರ್ಣವಾಗಿ ಸುಟ್ಟು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ. ಟಿ.ಕವಿತಾ, ಡಿವೈಎಸ್ಪಿ ಲಕ್ಷ್ಮಯ್ಯ, ಮೈಸೂರಿನ ಆರ್ಎಫ್ಎಸ್ಎಲ್ನ ಸಹಾಯಕ ನಿರ್ದೇಶಕಿ ಎನ್.ಕೃತಿಕಾ, ಡಿಎಸ್ಬಿ ಪೊಲೀಸ್ ಇನ್ಸ್ಪೆಕ್ಟರ್ ಎಲ್.ಸಿ.ಶ್ರೀಧರ್, ಉಪ ಪರಿಸರ ಅಧಿಕಾರಿ ಶೃತಿ ಇದ್ದರು.
Kshetra Samachara
23/01/2025 04:24 pm