ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಿಡುಗಡೆ ಬಯಸಿದ ಸುನಿಲ್ ಕುಮಾರ್ - ಕುಂಭಮೇಳದಲ್ಲಿ ಭಾಗಿ

ಉಡುಪಿ: ಮಾಜಿ ಸಚಿವ ವಿ. ಸುನಿಲ್ ಕುಮಾರ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಿಂದಕ್ಕೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ವಿಪರೀತ ಚರ್ಚೆಗಳು ಚಾಲ್ತಿಯಲ್ಲಿರುವಾಗಲೇ ಸುನಿಲ್ ಕುಮಾರ್ ಪ್ರಯಾಗ್ರಾಜ್ ಗೆ ತೆರಳಿದ್ದಾರೆ. ಗಂಗಾ ಯಮುನಾ ಸರಸ್ವತಿ ಸಂಗಮ ಸ್ಥಾನದಲ್ಲಿ ಪುಣ್ಯ ಸ್ನಾನ ಕೈಗೊಂಡಿದ್ದಾರೆ. ಕುಟುಂಬ ಸಹಿತ ಭಾಗವಹಿಸಿರುವ ಅವರು ಸನಾತನ ಪರಂಪರೆಯ ಈ ಅಪೂರ್ವ ಗಳಿಗೆಯಲ್ಲಿ ಭಾಗಿಯಾಗುತ್ತಿರುವುದು ಸಂತೋಷ ನೀಡಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರಕಾರ ಕೈಗೊಂಡಿರುವ ಕುಂಭಮೇಳ ವ್ಯವಸ್ಥೆಗಳನ್ನು ಹಾಡಿ ಕೊಂಡಾಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಜನರು ಬಂದು ಕುಂಭಮೇಳದಲ್ಲಿ ಭಾಗವಹಿಸುವಂತೆ ನಿವೇದಿಸಿದ್ದಾರೆ.

Edited By : Ashok M
PublicNext

PublicNext

20/01/2025 12:50 pm

Cinque Terre

36.13 K

Cinque Terre

1