ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಯುವ ಪಡೆಯಿಂದ ಶ್ರಮದಾನದ ಮೂಲಕ ಕಾರ್ನಾಡ್ ಹೊಂಡಮಯ ರಸ್ತೆ ತಾತ್ಕಾಲಿಕ ದುರಸ್ತಿ

ಮುಲ್ಕಿ: ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡ್ ಸರಕಾರಿ ಆಸ್ಪತ್ರೆ ಬಳಿ, ಗೇರುಕಟ್ಟೆ ಬಳಿ ರಸ್ತೆಗಳಲ್ಲಿ ಅಪಾಯಕಾರಿ ಹೊಂಡಗಳಿಂದ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿದ ಮುಲ್ಕಿಯ ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ನ ಮಾಲಕರಾದ ಜೋನ್ ಕ್ವಾಡ್ರಸ್ ನೇತೃತ್ವದ ಯುವ ಪಡೆ ಭಾನುವಾರ ರಾತ್ರಿ ಶ್ರಮದಾನದ ಮೂಲಕ ತಾತ್ಕಾಲಿಕ ನೆಲೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಮೂಲಕ ಹೊಂಡ ಮುಚ್ಚಿ ರಸ್ತೆ ದುರಸ್ತಿ ಪಡಿಸಿದ್ದಾರೆ.

ಇವರ ಜೊತೆ ಸುರಭಿ ಎಲೆಕ್ಟ್ರಾನಿಕ್ಸ್ ನ ಮ್ಯಾನೇಜರ್ ಸುಪ್ರೀತ ಪುನರೂರ್, ಯುವಪಡೆಯ ಸಂಪತ್ ಉಚ್ಚಿಲ, ಸಚಿನ್, ನರೇಶ್ ಹಾಗೂ ಮೇಸ್ತ್ರಿ ಗಳಾದ ಪುನಃರೂರಿನ ಶಶಿಧರ್ ಹಾಗೂ ವಿಶ್ವನಾಥ್ ರವರು ಸಹಕರಿಸಿದ್ದಾರೆ.

ಕಳೆದ ವರ್ಷದಲ್ಲಿ ಕೂಡ ಇದೇ ಯುವ ಪಡೆ ಹೊಂಡಮಯವಾದ ರಸ್ತೆ ಅವ್ಯವಸ್ಥೆ ಸರಿಪಡಿಸಿದ ಬಗ್ಗೆ ಸಾರ್ವಜನಿಕರಿಂದ ಅಭಿನಂದನೆ ವ್ಯಕ್ತವಾಗಿತ್ತು.

Edited By : PublicNext Desk
Kshetra Samachara

Kshetra Samachara

21/10/2024 02:59 pm

Cinque Terre

2.21 K

Cinque Terre

0

ಸಂಬಂಧಿತ ಸುದ್ದಿ