ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಒಂದೇ ದೇವಸ್ಥಾನದಲ್ಲಿ 3 ಬಾರಿ ಕಳ್ಳತನ!- ಪತ್ತೆಯಾಗದ ಚೋರರು, ಕೈ ಚೆಲ್ಲಿದ ಪೊಲೀಸರು

ಹಾಸನ: ದೇವಸ್ಥಾನದ ಬಾಗಿಲು ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಸಾಮಾನು, ಹುಂಡಿ ಹಣ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಶಂಕರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಒಂದೇ ದೇವಾಲಯದಲ್ಲಿ ಮೂರನೇ ಬಾರಿಗೆ ಕಳ್ಳತನವಾಗಿದ್ದು, ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಹಾಗೂ ಶ್ರೀ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ಚೋರರು ಬೆಳ್ಳಿ ವಸ್ತುಗಳು, ಪೂಜಾ ಸಾಮಾನುಗಳು ಹಾಗೂ ದೇವಾಲಯದ ಒಳಗೆ ಇಟ್ಟಿದ್ದ ಬೀರುವಿನ ಬೀಗ ಒಡೆದು ವಸ್ತುಗಳನ್ನು ಕದ್ದೊಯ್ದಿದ್ದಾರೆ.

ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಹಾಗೂ ಶ್ರೀ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮೂರು ಬಾರಿ ಕಳ್ಳತನವಾಗಿದೆ. ಆದರೂ ಕಳ್ಳರನ್ನು ಪತ್ತೆ ಹಚ್ಚಲು ಹಾಸನ ಗ್ರಾಮಾಂತರ ಠಾಣೆ ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

Edited By : Nagesh Gaonkar
PublicNext

PublicNext

20/10/2024 05:46 pm

Cinque Terre

39.88 K

Cinque Terre

2

ಸಂಬಂಧಿತ ಸುದ್ದಿ