ಹಾಸನ: ಹಾಸನ ಲೋಕಸಭಾ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹಂಚಿಕೆ ಈಗ ಸದ್ದು ಮಾಡುತ್ತಿದೆ. ಚುನಾವಣೆ ನಡೆದು ನಾಲ್ಕು ತಿಂಗಳ ಬಳಿಕ ಸದ್ದು ಮಾಡುತ್ತಿರುವ ಆಡಿಯೋ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರದ್ದು ಎನ್ನಲಾಗಿದ್ದು, ವೈರಲ್ ಆಗಿದೆ.
ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು.ಒಟ್ಟು ಏಳು ಕೋಟಿ ಹಣ ಹಂಚಿಕೆಯ ಬಗ್ಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಐದು ಕೋಟಿ ಕೊಡ್ತಾರೆ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಒಂದು ಕೋಟಿ ಮತ್ತು ನಾನು ಒಂದು ಕೋಟಿ ರೂ, ಕೊಡುತ್ತೇನೆ. ಒಟ್ಟು ಏಳು ಕೋಟಿ ಹಂಚಿಕೆ ಆಗಬೇಕು ಎಂದು ಕೆ.ಎಂ.ಶಿವಲಿಂಗೇಗೌಡ ತಮ್ಮ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಪ್ರತಿ ಓಟಿಗೆ ಐನೂರು ರೂ ಕೊಡಬೇಕು. ಒಟ್ಟು ಶೇಕಡಾ 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕ್ತಾರೆ ಎಂದು ಗೊತ್ತಿರುತ್ತೆ ಅವರಿಗೆ ಕೊಡಿ. ಅವರು 30 ಪರ್ಸೆಂಟ್ ಮತ ತಗೊತಾರೆ ಅವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ, ಸಂಸದ ಚಂದ್ರಶೇಖರ್ ಅವರೇ ತೀರ್ಮಾನ ಮಾಡಿದ್ದಾರೆ ಅದರಂತೆ ಹಂಚಲಿ.ಬಿ.ಶಿವರಾಂ ಅವರು ಮನೆಗೊಂದು ಸಾವಿರ ಕೊಡ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ ಅವರು ಐನೂರು ಕೊಟ್ಟಿದ್ದಾರೆ.
ನಾವೂ ಒಂದು ಓಟ್ಗೆ 500 ಕೊಡಬೇಕು.ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಿ.ಶಿವರಾಂ ಅವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೀರ್ಮಾನ ಆಗಿರೋದು ಐನೂರು ಹಂಚಬೇಕು. ಐನೂರು ಹಂಚಲಿಲ್ಲ ಎಂದರೆ ಚೆನ್ನಾಗಿರಲ್ಲ ಅಂತಾ ಹೇಳಿ ಎಂದು ಮಾತನಾಡಿದ್ದಾರೆ ಎನ್ನಲಾಗಿರುವುದು ಸುದ್ದಿಯಾಗಿ ಹರಿದಾಡುತ್ತಿದೆ.
ಅಧಿಕಾರ ಇದ್ದಾಗ ಅವರ ಅಳಿಯನಿಗೆ ಬೇಕಾದ ಹಾಗೆ ಅಸ್ತಿ ಮಾಡಿಕೊಟ್ಟಿದ್ದಾರೆ.
ಮಾತಿನ ನಡುವೆ ಪೆನ್ಡ್ರೈವ್ ಹಾಗೂ ಅಶ್ಲೀಲ ವೀಡಿಯೋ ಬಗ್ಗೆಯೂ ಮಾತುಗಳಿವೆ.
ಇಂತಹ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ವೀಡಿಯೋ ಲೀಕ್ ಆದ ನಂತರ ಕುಮಾರಸ್ವಾಮಿ ಅವರೇ ಪ್ರಚಾರಕ್ಕೆ ಬರಲಿಲ್ಲ.ದೇವೇಗೌಡರು ಅಂತಹ ವಯಸ್ಸಿನಲ್ಲಿ ಬಂದು ಪ್ರಚಾರ ಮಾಡಬೇಕಾ...
ಬೇರೆ ಯಾರೂ ಇರಲಿಲ್ಲವೆ...? ಬಿಜೆಪಿ ನಾಯಕರು ಕೆಲಸ ಮಾಡ್ತಾ ಇಲ್ಲಾ, ಬೇಲೂರು ಶಾಸಕ ಸುರೇಶ್ ಕೆಲಸ ಮಾಡ್ತಾ ಶಿವಲಿಂಗೇಗೌಡ ಆಪ್ತರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರೆಕಾರ್ಡ್ ಮಾಡಿ ವೈರಲ್ ಆಗಿದೆ.
ಬೇಲೂರಿನಲ್ಲಿ ಬಿ.ಶಿವರಾಂ ಸರಿಯಾಗಿ ಪ್ರಚಾರ ಮಾಡ್ತಾ ಇಲ್ಲಬಿ.ಶಿವರಾಂ ಬಂದ ನಂತರ ರೌಡಿಗಳು ಚಿಗುರಿಕೊಂಡಿದ್ದಾರೆ. ಹಿಂದೆ ಬೇಲೂರಿನಲ್ಲಿ ರುದ್ರೇಶ್ಗೌಡ ಇದ್ದಾಗ ಅವರನ್ನು ದೂರ ಇಟ್ಟಿದ್ದರು. ರೌಡಿಗಳನ್ನು ಜೊತೆಯಲ್ಲಿ ಇಟ್ಟುಕೊಂಡು ರಾಜಕೀಯ ಮಾಡ್ತಾರೆ ಹೀಗಾದ್ರೆ ಯಾರು ಓಟ್ ಹಾಕ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
18/10/2024 02:42 pm