ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಮಾಹಿತಿ ನೀಡದೆ ಒತ್ತುವರಿ ತೆರವು - ಅಧಿಕಾರಿಗಳ ವಿರುದ್ಧ ಶಾಸಕ ಸ್ವರೂಪ ಪ್ರಕಾಶ್ ಆಕ್ರೋಶ

ಹಾಸನ: ನಗರದ ತಣ್ಣೀರು ಹಳ್ಳದ ಬಳಿ ನಗರಸಭೆ ವತಿಯಿಂದ ಒತ್ತುವರಿ ತರವು ಮಾಡಲಾಗಿದ್ದ ಸ್ಥಳಕ್ಕೆ ಶಾಸಕ ಸ್ವರೂಪ ಪ್ರಕಾಶ್ ಭೇಟಿ ನೀಡಿ ನಗರಸಭೆ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರಸಭೆ ವತಿಯಿಂದ ಇಂದು ಬೆಳ್ಳಂ ಬೆಳಗ್ಗೆ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿ ವಿರುದ್ಧ ನಗರಸಭೆ ಆಯುಕ್ತರು ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ್ದರು, ಆದರೆ ಈ ಮೊದಲೇ ಯಾವುದೇ ನೋಟಿಸ್ ನೀಡದೆ ಕಾರ್ಯಚರಣೆ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಅಲ್ಲದೆ ಸ್ಥಳೀಯ ಶಾಸಕರು ಹಾಗೂ ನಗರಸಭೆ ಅಧ್ಯಕ್ಷರ ಗಮನಕ್ಕೆ ತಾರದೆ ತೆರವು ಕಾರ್ಯಾಚರಣೆ ನಡೆಸಿರುವುದಕ್ಕೆ ಪ್ರಸನ್ನ ಹೊರಹಾಕಿದ ಶಾಸಕ ಸ್ವರೂಪ ಪ್ರಕಾಶ್ ಕೂಡಲೇ ಸ್ಥಳಕ್ಕೆ ಆಗಮಿಸಿ, ಉತ್ತರ ನೀಡುವಂತೆ ನಗರಸಭೆ ಆಯುಕ್ತರಿಗೆ ತಾಕೀತು ಮಾಡಿದರು. ಸ್ಥಳಕ್ಕೆ ಬರೆದಿದ್ದರೆ ನಗರಸಭೆ ಮುಂದೆಯೇ ಅನಿರ್ದಿಷ್ಟವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

Edited By : Shivu K
PublicNext

PublicNext

16/10/2024 02:26 pm

Cinque Terre

21.23 K

Cinque Terre

0

ಸಂಬಂಧಿತ ಸುದ್ದಿ