ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆ ಹೊಲಗಳು ಜಲಾವೃತ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗಗಳಾದ ಕಡೂರು, ಬೀರೂರು, ಅಜ್ಜಂಪುರ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಅಪಾರ ಹಾನಿ ಸಂಭವಿಸಿದೆ. ತರಿಕೆರೆ ತಾಲೂಕಿನಲ್ಲಿ ಒಂದೇ ಸಮನೆ ಸುರಿದ ಧಾರಾಕಾರ ಮಳೆಗೆ ಸಣ್ಣಬೋಕಿಕೆರೆ, ಗೊಲ್ಲರಹಳ್ಳಿ ಕೋರನಹಳ್ಳಿ, ಚಟ್ಟನಹಳ್ಳಿ, ಶಿವಪುರ ಗ್ರಾಮದಲ್ಲಿ ಹೊಲಗಳು ಜಲಾವೃತಗೊಂಡಿವೆ.

ಪರಿಣಾಮ ಹೂವಿನ ಹೊಲಗಳಲ್ಲಿ ನೀರು ನಿಂತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ. ಹೀಗೆ ಮಳೆ ಮುಂದುವರೆದರೆ ತರಕಾರಿ ಸೊಪ್ಪುಗಳು ನೆಲಕಚ್ಚಲಿದ್ದು ಮತ್ತಷ್ಟು ಸಂಕಷ್ಟ ಎದುರಾಗಲಿದೆ.

Edited By : PublicNext Desk
Kshetra Samachara

Kshetra Samachara

20/10/2024 04:31 pm

Cinque Terre

460

Cinque Terre

0

ಸಂಬಂಧಿತ ಸುದ್ದಿ