ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದಿನಗೂಲಿ 750 ನಿಗದಿ ಮಾಡುವಂತೆ ಕಾಫಿ ತೋಟ ಕಾರ್ಮಿಕರ ಪ್ರತಿಭಟನೆ

ಚಿಕ್ಕಮಗಳೂರು: ಕಾಫಿ ತೋಟ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಹಾಗೂ ಕಾರ್ಮಿಕ ಕಾಯಿದೆ ಉಲ್ಲಂಘನೆ ವಿರೋಧಿಸಿ ಕರ್ನಾಟಕ ಮಲೆನಾಡು ಕಾಫಿ ತೋಟ ಕಾರ್ಮಿಕರ ಸಂಘದ ವತಿಯಿಂದ ಚಿಕ್ಕಮಗಳೂರಿನ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ ನಡೆಸರಲಾಯಿತು.

ಕಾರ್ಮಿಕರ ಇಲಾಖೆಯಾಗಲಿ, ಮಂತ್ರಿ ಶಾಸಕರಾಗಲಿ ಕಾರ್ಮಿಕರ ಪರವಾಗಿ ಇದುವರೆಗೆ ಕಾರ್ಯ ನಿರ್ವಹಿಸದೆ ಅಧಿವೇಶನದಲ್ಲಿ ಕಾರ್ಮಿಕರ ಕುರಿತು ಚರ್ಚೆ ನಡೆಸದೆ ಕಾರ್ಮಿಕ ವಿರೋಧಿ ನಿಲುವು ಹೊಂದಿದ್ದಾರೆ, ಹಾಗೂ ಬಜೆಟ್ ನಲ್ಲಿ ಕಾಫಿ ತೋಟದ ಕಾರ್ಮಿಕರಿಗೆ ಯಾವುದೇ ಅನುದಾನ ಮೀಸಲಿಡದೆ ಕಾರ್ಮಿಕರಿಗೆ ಬಹುದೊಡ್ಡ ದ್ರೋಹವೆಸಗಿದ್ದಾರೆ ಎಂದು ಪ್ರತಿಭಟನೆಯಲ್ಲಿ ಆರೋಪಿಸಿದರು. ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಕಾರ್ಮಿಕರ ಸಂಬಳವನ್ನು ದಿನಕ್ಕೆ 750ಕ್ಕೆ ನಿಗದಿ ಮಾಡಬೇಕೆಂದು ಓತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/10/2024 06:34 pm

Cinque Terre

800

Cinque Terre

0

ಸಂಬಂಧಿತ ಸುದ್ದಿ