ಸಿದ್ದಾಪುರ : ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ತಹಶೀಲ್ದಾರ್ ಎಂ.ಆರ್ ಕುಲ್ ಕರ್ಣಿ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಎಲ್ಲಾ ಇಲಾಖೆಯವರು ಸಮಾನ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕು ಯಾರು ಸರಿದುಕೊಳ್ಳುವುದು ಸರಿಯಲ್ಲ, ಶಿಕ್ಷಣ,ಆರೋಗ್ಯ,ಪಿ ಡಬ್ಲ್ಯೂ ಡಿ, ಪೊಲೀಸ್, ಅರಣ್ಯ,,ಸಮಾಜ ಕಲ್ಯಾಣ, ಪಟ್ಟಣ ಪಂಚಾಯತ್ ಹಾಗೂ ಇನ್ನೂ ಹಲವು ಇಲಾಖೆಯವರು ಅವರವರಿಗೆ ನೀಡಲಾದ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.
ಭುವನಗಿರಿಯ ಭುವನೇಶ್ವರಿ ದೇವರಿಗೆ ಪೂಜೆ ಸಲ್ಲಿಸಿ ಜ್ಯೋತಿಯನ್ನ ಪಟ್ಟಣಕ್ಕೆ ತರುವುದು ಪಟ್ಟಣದಲ್ಲಿ ಕನ್ನಡ ತಾಯಿಗೆ ಪೂಜೆ ಸಲ್ಲಿಕೆ, ಮೆರವಣಿಗೆ, ಸಭಾ ಕಾರ್ಯಕ್ರಮ ಸನ್ಮಾನ ಹೀಗೆ ಎಲ್ಲಾ ಕಾರ್ಯಕ್ರಮದ ಕುರಿತು ವಿವರವಾಗಿ ತಿಳಿಸಿದರು.
ಸಭೆಯಲ್ಲಿ ಇ ಒ ದೇವರಾಜ ಹಿತ್ಲಕೊಪ್ಪ, ಸಿಡಿಪಿಒ ಪೂರ್ಣಿಮಾ ದೊಡ್ಮನಿ, ಟಿ ಎಚ್ ಒ ಡಾ ಲಕ್ಷ್ಮಿಕಾಂತ್ ನಾಯ್ಕ್, ಪ ಪಂ ಮುಖ್ಯಧಿಕಾರಿ ಜೆ.ಆರ್ ನಾಯ್ಕ್, ಮತ್ತಿತರ ಅಧಿಕಾರಿಗಳು ಹಾಜರಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
19/10/2024 08:46 pm