ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾರೋಹಳ್ಳಿ: 4 ಗಂಟೆಯಲ್ಲೇ ಪ್ರಕರಣ ಭೇದಿಸಿದ ಕಗ್ಗಲೀಪುರ ಪೊಲೀಸರು

ಹಾರೋಹಳ್ಳಿ: ಕಳ್ಳತನ 4 ಗಂಟೆಯಲ್ಲಿಯೇ ಪ್ರಕರಣ ಬೇಧಿಸುವಲ್ಲಿ ಕಗ್ಗಲೀಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾತಗುಣಿ - ಕುಪ್ಪರೆಡ್ಡಿ ಕೆರೆ ಕ್ರಾಸ್ ಬಳಿ ವ್ಯಕ್ತಿಯೊಬ್ಬರನ್ನು ಬೆದರಿಸಿ, ಬಲವಂತವಾಗಿ ಕಾರು ಕಿತ್ತುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಪ್ರಕರಣ ನಡೆದ 4 ಗಂಟೆಯೊಳಗೆ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 17 ರಾತ್ರಿ 11.45ರಲ್ಲಿ ಮನೋಹರ್ ಸಿಂಗ್ ಎಂಬ ವ್ಯಕ್ತಿ ಸ್ವಿಫ್ಟ್ ಡಿಜೈರ್ ಕಾರನ್ನು ಬೆಂಗಳೂರು ಕೆಂಗೇರಿ ಹೋಬಳಿ, ತಾತಗುಣಿ-ಕುಪ್ಪರೆಡ್ಡಿ ಕೆರೆ ಕ್ರಾಸ್ ಬಳಿ ಇಬ್ಬರು ಅಪರಿಚಿತರು ಅಡ್ಡಗಟ್ಟಿ ಚಾಲಕನಿಗೆ ಚಾಕು ತೋರಿಸಿ, ಬೆದರಿಸಿ ಕಾರಿನ ಕೀ ಪಡೆದುಕೊಂಡು ಕಾರನ್ನು ಎಗರಿಸಿಕೊಂಡು ಹೋಗಿದ್ದರು. ದೂರು ನೀಡಿದ 4 ಗಂಟೆಯೊಳಗೆ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 9 ಲಕ್ಷ ಬೆಲೆಬಾಳುವ ಸ್ವಿಫ್ಟ್ ಡಿಜೈರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ತಾತಗುಣಿಯ ಚಂದು (25) ಮತ್ತು ಭರತ್ ಕುಮಾರ್ (37) ಎಂಬುವವರನ್ನು ಬಂಧಿಸಲಾಗಿದೆ. ಕಗ್ಗಲೀಪುರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ವೆಂಕಟೇಶ್.ಕೆ ನೇತೃತ್ವದಲ್ಲಿ ಪಿಎಸ್ಐ ಲೋಕೇಶ್ ಸಿ, ಸರಸ್ವತಮ್ಮ, ಪ್ರಕಾಶ, ಮುರಳೀಧರ, ನಾಗರಾಜು, ಮಂಜುನಾಥ ಭಾಗಿಯಾಗಿದ್ದರು.

Edited By : Nagaraj Tulugeri
Kshetra Samachara

Kshetra Samachara

19/10/2024 07:13 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ