ರಾಮನಗರ : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತವೆ ಎಂದು ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೂತು ಹಾಕಿದ್ದ ಆಕೆಯ ಇಬ್ಬರು ಮಕ್ಕಳ ಶವಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಲಾಯಿತು. ಮಕ್ಕಳ ತಾಯಿ ಸ್ವೀಟಿ ಮತ್ತು ಆಕೆಯ ಪ್ರಿಯಕರ ಗ್ರೆಗೋರಿ ಫ್ರಾನ್ಸಿಸ್ ನೀಡಿದ ಮಾಹಿತಿ ಮೇರೆಗೆ ಇಲ್ಲಿನ ಎಪಿಎಂಸಿ ಬಳಿ ಇರುವ ಮಸಣದಲ್ಲಿ ಕಬಿಲ (2) ಹಾಗೂ ಕಬೀಲನ್ (11 ತಿಂಗಳು) ಶವಗಳನ್ನು ಹೊರತೆಗೆಯಲಾಯಿತು.
ತಹಶೀಲ್ದಾರ್ ತೇಜಸ್ವಿನಿ, ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ, ಐಜೂರು ಠಾಣೆ ಪಿಎಸ್ ಐ ದುರಗಪ್ಪ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಮಕ್ಕಳ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆರೋಪಿಗಳಾದ ಸ್ವೀಟಿ, ಗ್ರೆಗೋರಿ ಫ್ರಾನ್ಸಿಸ್ ಹಾಗೂ ಸ್ವೀಟಿಯ ಪತಿ ಶಿವ ಸಹ ಇದ್ದರು.
PublicNext
15/10/2024 06:47 pm