ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಂಚಿನಾಳ ಗ್ರಾಮ ಸ್ಥಳಾಂತರ ಪರಿಶೀಲನೆ ಅಗತ್ಯ - ಡಿಸಿ ದಿವ್ಯ ಪ್ರಭು

ಕುಂದಗೋಳ : ಈ‌ ಹಿಂದೆ ಹಂಚಿನಾಳ ಗ್ರಾಮ ಹೊಸ ಹಂಚಿನಾಳವಾಗಿ ಮಾರ್ಪಟ್ಟು ಸ್ಥಳಾಂತರವಾಗಿದೆ ಎಂಬ ಮಾಹಿತಿ ಇದ್ದರೂ, ತಾಂತ್ರಿಕ ಸಮಸ್ಯೆ ಕಾರಣ ಅದು ಇತ್ಯರ್ಥ ಆಗಿಲ್ಲ. ಶೀಘ್ರವೇ ಜನರ ಅಭಿಪ್ರಾಯದಂತೆ ಹಂಚಿನಾಳ ಗ್ರಾಮದ 300 ಕುಟುಂಬಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ತೆರೆದ ಗಂಜೀ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು 'ಗಂಜೀ ಕೇಂದ್ರ ತೆರೆದು ಹಂಚಿನಾಳ ಗ್ರಾಮದ ಜನರಿಗೆ ಇದೀಗ ಸೌಕರ್ಯ ನೀಡಿದ್ದೇವೆ. ಜನರಿಗೂ ಈ ಸೌಕರ್ಯ ಸಂಪೂರ್ಣವಾಗಿ ತಲುಪಿವೆ ಎಂದರು.

ಇನ್ನೂ ಪ್ರತಿವರ್ಷ ಮಳೆಗಾಲದಲ್ಲಿ ಹಂಚಿನಾಳ ಗ್ರಾಮದ ಜನರನ್ನೂ ಕಾಡುವ ಸಮಸ್ಯೆಗೆ ನಾವು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ನಮಗೆ ತಾಂತ್ರಿಕ ದೋಷ ಮತ್ತು ಈ ಹಿಂದೆ 50 ವರ್ಷಗಳ ಹಿಂದೆ ಶಿಫ್ಟಿಂಗ್ ವಿಲೇಜ್ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಾವು ಪರಿಶೀಲಿಸಬೇಕು ಸಮಯ ಬೇಕು ಎಂದರು.

ಇನ್ನೂ ನಮಗೆ ಶಾಶ್ವತ ಸೂರು ಸಿಗುವವರೆಗೂ ಗಂಜೀ ಕೇಂದ್ರ ಬಿಡುವದಿಲ್ಲಾ ಎಂಬ ಸಂತ್ರಸ್ತರ ಪ್ರಶ್ನೆಯನ್ನು ಪರ್ತಕರ್ತರು ಕೇಳಿದಾಗ 'ಶಿಫ್ಟಿಂಗ್ ವಿಲೇಜ್ ಎನ್ನುವುದು ಓವರ್ ನೈಟ್ ಒಳಗೆ ಮಾಡುವ ಕೆಲಸವಲ್ಲಾ' ಅದಕ್ಕೆ ಪರ್ಯಾಯವಾಗಿ ಕ್ರಮಬೇಕು ಮಳೆಗಾಲದಲ್ಲಿ ಆಗುವ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇವೆ ಬೇಸಿಗೆಯಲ್ಲಿ ಇವರಿಗೆ ತೊಂದರೆ ಇಲ್ಲಾ ಸಮಯಾವಕಾಶ ಬೇಕಿದೆ ಎಂದರು.

Edited By : Suman K
Kshetra Samachara

Kshetra Samachara

19/10/2024 04:45 pm

Cinque Terre

20.84 K

Cinque Terre

1

ಸಂಬಂಧಿತ ಸುದ್ದಿ