ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕೇರಳದ ಕಾಞಂಗಾಡ್ ಮೂಲದ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಬೆಳಗಿನ ಜಾವ ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯ ದೇವರ ಕೊಲ್ಲಿ ಬಳಿ ನಡೆದಿದೆ.
ಸುಳ್ಯದಿಂದ ಸಂಪಾಜೆ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ಕಾರು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ದೇವರಕೊಲ್ಲಿಯಲ್ಲಿಯ ಹೋನೆಸ್ಟ್ ಸರ್ವಿಸ್ ಸ್ಟೇಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.
ಕಾರು ಶಬ್ದ ಕೇಳಿದ ಸ್ಥಳೀಯರಾದ ರಿಯಾಜ್ - ಎಂಬವರು ಬಂದು ಅಕ್ಕಪಕ್ಕದವರನ್ನು ಸೇರಿಸಿ ಗಾಯಾಳುಗಳನ್ನು ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಸಂಪಾಜೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಗಾಯಾಳುಗಳು ಬೆಳಗ್ಗೆ ತಮ್ಮ ಊರಾದ ಕಾಞಂಗಾಡ್ಡೆ ತೆರಳಿದ್ದಾರೆ.
Kshetra Samachara
18/10/2024 09:09 pm