ಸಲ್ಮಾನ್ ಖಾನ್ ಗೆ ಬಿಷ್ಣೋಯ್ ಮತ್ತು ಗ್ಯಾಂಗ್ ನಿರಂತರವಾಗಿ ಜೀವ ಬೇದರಿಕೆಯನ್ನು ಹಾಕುತ್ತಲೇ ಬಂದಿದೆ,ಒಮ್ಮೆ ಸಾರಿ ಕೇಳಿದ್ರೆ ಬಿಟ್ಟು ಬಿಡ್ತೀವಿ ಅಂದಿದ್ದ ಗ್ಯಾಂಗ ಈಗ ಐದು ಕೋಟಿ ಡಿಮ್ಯಾಂಡ್ ಇಟ್ಟಿದೆ.ಕೊಟ್ಟಿಲ್ಲವಂದರೆ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರಿಗಿಂತ ಕೆಟ್ಟ ಪರಿಸ್ಥಿತಿ ಸಲ್ಮಾನ್ ಗೆ ಆಗುತ್ತೆ ಎಂದು ಬೆದರಿಕೆ ಹಾಕಿದೆ.ಇಂತಹ ಒಂದು ಬೆದರಿಕೆ ಮೆಸೇಜ್ ಅನ್ನು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಗೆ ಕಳುಹಿಸಲಾಗಿದೆ."ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಸಲ್ಮಾನ್ ಖಾನ್ ಬದುಕಿ ಉಳಿಯಬೇಕಾದರೆ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ದ್ವೇಷವನ್ನು ಕೊನೆಗಾಣಿಸಲು ಬಯಸಿದರೆ ₹ 5 ಕೋಟಿ ನೀಡಬೇಕು. ಹಣ ನೀಡದಿದ್ದರೆ ಬಾಬಾ ಸಿದ್ದಿಕಿಗಿಂತ ಕೆಟ್ಟ ಪರಿಸ್ಥಿತಿಯಾಗುತ್ತದೆ ಎಂದು ಬೆದರಿಸಿದೆ.ಪೊಲೀಸರು ಸಂದೇಶದ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನ ಪಡುತ್ತಲಿದ್ದು,ಖಾನ್ ಬಾಂದ್ರಾ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ನಿನ್ನೆಯಷ್ಟೇ ಬಿಷ್ಣೋಯ್ ಗ್ಯಾಂಗ್ ನ ಸದಸ್ಯ ಆರೋಪಿ ಸುಖ ಅಲಿಯಾಸ್ ಸುಖಬೀರ್ ಬಲ್ಬೀರ್ ಸಿಂಗ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಈತ ಸಲ್ಮಾನ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಎನ್ನಲಾಗಿದೆ.ಕಳ್ಳಸಾಗಣೆಯಿಂದ ತಂದಂತಹ ವೆಪನ್ಗಳಾದ AK-47, M16 ಮತ್ತು AK-92 ಬಳಸಲು ತಂಡ ಯೋಜಿಸಿತ್ತು ಹಾಗೂ ಪಾಕಿಸ್ತಾನಿ ಮೂಲದ ವ್ಯಕ್ತಿ ಡೋಗರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಸಲ್ಮಾನ್ ಹತ್ಯೆಗೆ ಸಂಚು ರೂಪಿಸಿದ್ದ ಈತ.
PublicNext
18/10/2024 05:56 pm