ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : "ಸಿಂಹರೂಪಿಣಿ" ನಟಿ ಮೈಮೇಲೆ ಬಂದ ದೇವರು- ಮಾರಮ್ಮ ದೇವಿ ಪಾತ್ರದಲ್ಲಿ ಯಶಸ್ವಿನಿ "ಯಶಸ್ಸು"

ದೊಡ್ಡಬಳ್ಳಾಪುರ: ಭಕ್ತಿಪ್ರಧಾನ ಸಿಂಹರೂಪಿಣಿ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಗಳಿಗೆ ಭೇಟಿ ನೀಡುವ ವೇಳೆ, ಮಾರಮ್ಮ ಪಾತ್ರಧಾರಿ ಯಶಸ್ವಿನಿ ಮೈಮೇಲೆ ದೇವರು ಬಂದಿದ್ದು, ಥಿಯೇಟರ್ ಹೊರಗೆ ದೇವಿಯ ದರ್ಶನ ಕಂಡ ವೀಕ್ಷಕರು ಭಕ್ತಿಯಲ್ಲಿ ಕೈ ಮುಗಿದಿದ್ದಾರೆ.

ಕಿನ್ನಲ್ ರಾಜ್ ನಿರ್ದೇಶನದ ಸಿಂಹರೂಪಿಣಿ ಸಿನಿಮಾ ಶ್ರೀಮಾರಮ್ಮ ದೇವಿಯ ಕುರಿತ ಚಿತ್ರವಾಗಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆ ಕಂಡಿದೆ. ದೊಡ್ಡಬಳ್ಳಾಪುರ ತಾಲೂಕು ಕಲ್ಲುದೇವನಹಳ್ಳಿಯ ಶ್ರೀಮಾರಮ್ಮ ಸನ್ನಿಧಿಯ ಮಹಿಮೆ ಸಾರುವ ಚಿತ್ರವಾಗಿದ್ದು, ದೇವಸ್ಥಾನದ ಆರ್ಚಕರಾಗಿರುವ ಕೆ.ಎಂ.ನಂಜುಂಡೇಶ್ವರವರೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿಂಹರೂಪಿಣಿ ಸಿನಿಮಾದಲ್ಲಿ ಬಹುತೇಕ ದೊಡ್ಡಬಳ್ಳಾಪುರ ಕಲಾವಿದರೇ ಅಭಿನಯಿಸಿದ್ದಾರೆ.

ದೊಡ್ಡಬಳ್ಳಾಪುರದ ಸೌಂದರ್ಯಮಹಲ್ ನಲ್ಲಿ ಸಿಂಹರೂಪಿಣಿ ಸಿನಿಮಾ ಪ್ರದರ್ಶನವಾಗುತ್ತಿದ್ದು, ಸಿನಿಮಾ ನಟ- ನಟಿಯವರು ಇಂದು ಥಿಯೇಟರ್ ಗಳಿಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಸೌಂದರ್ಯಮಹಲ್ ಥಿಯೇಟರ್ ಬಳಿ ಬಂದಾಗ, ಥಿಯೇಟರ್ ಬಳಿ ಕೂರಿಸಲಾಗಿದ್ದ ಮಾರಮ್ಮ ದೇವಿಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಈ ವೇಳೆ ಮಾರಮ್ಮ ಪಾತ್ರದಲ್ಲಿ ನಟಿಸಿದ ಯಶಸ್ವಿನಿ ಮೇಲೆ ದೇವಿಯ ಅವಾಹನೆಯಾಗಿದ್ದು, ನಟಿಯ ಮೇಲೆ ಬಂದ ದೇವರನ್ನು ಕಂಡು ಪೇಕ್ಷಕರು ಒಂದು ಕ್ಷಣ ಬೆರಗಾಗಿದ್ದಾರೆ.

Edited By : Shivu K
PublicNext

PublicNext

18/10/2024 10:19 am

Cinque Terre

13.36 K

Cinque Terre

1