ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ಬೆಂಗಳೂರು ನಗರದಲ್ಲಿ ನಿರಂತರ ವರುಣನ ಆರ್ಭಟಕ್ಕೆ ಜನಜೀವನ ನಲುಗಿ ಹೋಗಿದೆ.
ಕಳೆದೆರಡು ದಿನ ಭಾರೀ ಮಳೆ ಬಿದ್ದ ಪರಿಣಾಮ ಬೆಂಗಳೂರು ನಗರದ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಇಂದು 10 ಅಡಿ ಎತ್ತರದ ಗೋಡೆ ಕುಸಿದು ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರು ಜಖಂಗೊಂಡಿದೆ. ಇನ್ನೂ ನವೀನ್ ಕುಮಾರ್ ಎಂಬುವರ i 20 ಕಾರು ಮತ್ತೊಂದು ಮನೋಹರ್ ಎಂಬುವರ ಸುಜುಕಿ ಕಂಪನಿ ಕಾರು ಜಖಂಗೊಂಡಿವೆ.
PublicNext
17/10/2024 04:58 pm