ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಕ್ಷೀರಸಾಗರ ಗ್ಯಾರೇಜ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.9ರಂದು ಪಂಜಿನಡ್ಕದ ಸತೀಶ್ ತನ್ನ ಹೋಂಡಾ ಆಕ್ಟಿವಾ ವಾಹನವನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಕ್ಷೀರಸಾಗರ ಬಳಿಯ ವಿನಾಯಕ ಗ್ಯಾರೇಜ್ನಲ್ಲಿಜನರಲ್ ಚೆಕಪ್ ಮುಗಿಸಿ ಕೀ ಸಮೇತ ಗ್ಯಾರೇಜ್ ಪಕ್ಕದಲ್ಲಿ ನಿಲ್ಲಿಸಿದ್ದರು. ಮಧ್ಯಾಹ್ನ 3.30ರಿಂದ 4.15ರ ಸಮಯ ಕಳ್ಳರು ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದು, ಠಾಣೆಗೆ ದೂರು ನೀಡಲಾಗಿತ್ತು. ವಾಹನದ ಮೌಲ್ಯ 25ಸಾವಿರ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
18/10/2024 07:40 am