ಮಲ್ಪೆ: ಕರಾವಳಿ ಕಡಲತೀರದಲ್ಲಿ ವಿವಿಧ ರೀತಿಯ ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಗೂ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾಗಿದ್ದು, 2 ಬೋಟ್ಗಳು ಹಾಗೂ 2 ದ್ವಿಚಕ್ರ ವಾಹನ ಮತ್ತು ನಕಲಿ ಬಾಂಬ್ಗಳನ್ನು ವಶಕ್ಕೆ ಪಡೆಯಲಾಯಿತು. ಆದರೆ ಇದು ನೈಜ ಸುದ್ದಿಯಲ್ಲ ,ಬದಲಾಗಿ ಅಣಕು ಕಾರ್ಯಾಚರಣೆ.
ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ವಿಧ್ವಂಸಕ ಕೃತ್ಯ ನಡೆದಾಗ ನೌಕಪಡೆ, ಕರಾವಳಿ ಕಾವಲು ಪಡೆ ಇತ್ಯಾದಿ ಸ್ಪಂದನೆ, ಕಾರ್ಯಾಚರಣೆ ಹೇಗಿರಲಿದೆ ಎಂಬ ಕುರಿತು ಅಣಕು ಕಾರ್ಯಾಚರಣೆಯನ್ನು ಆಯೋಜಿಸಿತ್ತು.ಇದೇ ವೇಳೆ ಸ್ಥಳೀಯರ ಸಹಭಾಗಿತ್ವದ ಬಗ್ಗೆ ಮಾಹಿತಿ ನೀಡಲಾಯಿತು.
“ಸಾಗರ್ ಕವಚ್’ ಅಣಕು ಕಾರ್ಯಾಚರಣೆಯನ್ನು ಜಿಲ್ಲೆಯ ಮಲ್ಪೆ ಬಂದರು ಸಹಿತ ಹೆಜಮಾಡಿ ಲೈಟ್ ಹೌಸ್, ಗಂಗೊಳ್ಳಿ ಹಾಗೂ ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ನಡೆಸಲಾಯಿತು. ಗುರುವಾರವೂ ಅಣಕು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಕರಾವಳಿ ಕಾವಲು ಪಡೆ ಎಸ್ಪಿ ಮಿಥುನ್ ಎಚ್ .ಎನ್ ಮಾಹಿತಿ ನೀಡಿದರು.
PublicNext
17/10/2024 04:59 pm