ಬೆಂಗಳೂರು: ಅವ್ರೆಲ್ಲ ದೂರದ ಆಂಧ್ರದಿಂದ ಹೊಟ್ಟೆ ಹೊರೆಯಲು ಗಾರೆ ಕೆಲಸಕ್ಕೆ ಬಂದಿದ್ರು. ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದಿದ್ರೆ ಇವತ್ತು ಈ ದುರಂತ ನಡಿತಿರ್ಲಿಲ್ಲ. ಆಸೆ ಅನ್ನೋ ಅಮಲಿಗೆ ಬಿದ್ದ ಪತ್ನಿ ಮಗನ ವಯಸ್ಸಿನ ಹುಡುಗ ಜೊತೆಗೆ ಸಂಬಂಧ ಹೊಂದಿದ್ಳಂತೆ. ಈ ಅನುಮಾನ ತಲೆಗೇರಿಸಿಕೊಂಡ ಗಂಡ ಪತ್ನಿ ಮತ್ತು ಪ್ರಿಯಕರನನ್ನ ಕೊಂದು ತಾನು ನೇಣಿಗೆ ಶರಣಾಗಿದ್ದಾನೆ.
ಅದು ನಿರ್ಮಾಣ ಹಂತದ ಕಟ್ಟಡ, ಅವ್ರೆಲ್ಲ ಅದೇ ಕಟ್ಟದದ ಒಂದು ಭಾಗದಲ್ಲಿ ವಾಸವಾಗಿದ್ರು. ಆಂಧ್ರದಿಂದ ಬಂದ ಎರಡ್ಮೂರು ಕುಟುಂಬಗಳು ಪೈಕಿ ಫೈತಮ್ಮ (40), ಗೊಲ್ಲಬಾಬು (45) ದಂಪತಿ ಕೂಡ ಇದೇ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ರು. ಕೆಲ ವರ್ಷಗಳಿಂದ ನಗರದ ಹಲವು ಬಿಲ್ಡಿಂಗ್ ಗಳಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ರು. ಈ ಮಧ್ಯೆ ಫೈತಮ್ಮನ ನಡವಳಿಕೆ ಮೇಲೆ ಪತಿ ಗೊಲ್ಲಬಾಬು ಅನುಮಾನ ವ್ಯಕ್ತಪಡಿಸಿದ್ದ. ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಗಲಾಟೆ ಕೂಡ ನಡೆದಿದ್ಯಂತೆ. ಇಷ್ಟಾದ್ರೂ ನಿನ್ನೆ ತಡ ರಾತ್ರಿಯಲ್ಲಿ ಗೊಲ್ಲಬಾಬು ಪತ್ನಿ ಫೈತಮ್ಮ ಗಣೇಶ್ ಕುಮಾರ್ ಜೊತೆಗಿದ್ದ ಸಮಯದಲ್ಲಿ ಸಿಕ್ಕಿಬಿದ್ದಿದ್ಳಂತೆ. ಈ ವೇಳೆ ರೊಚ್ಚಿಗೆದ್ದ ಗೊಲ್ಲಬಾಬು ಅಲ್ಲೆ ಪಕ್ಕದಲ್ಲಿದ್ದ ಮರದ ರಿಪೀಸ್ ನಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ.
ಹಲ್ಲೆ ರಭಸಕ್ಕೆ ಗಣೇಶ್ ಹಾಗೂ ಫೈತಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇದಾದ ನಂತರ ಫೈತಮ್ಮ ತಂಗಿಗೆ ಕರೆ ಮಾಡಿದ ಗೊಲ್ಲಬಾಬು ನಿಮ್ಮ ಅಕ್ಕ ಗಣೇಶನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ರೆಡ್ ಹ್ಯಾಂಡ್ ಆಗಿ ನನ್ನ ಕೈಗೆ ಸಿಕ್ಕಿ ಬಿದ್ಳು. ಈ ವೇಳೆ ರಿಪಿಸ್ ನಿಂದ ಹೊಡೆದು ಇಬ್ಬರನ್ನ ಕೊಲೆ ಮಾಡಿದ್ದೇನೆ. ನಾನು ನೇಣಿಗೆ ಶರಣಾಗುತ್ತೇನೆ ಅಂತ ಅದೇ ಕಟ್ಟಡದಲ್ಲಿ ನೇಣಿಗೆ ಶರಣಾಗಿದ್ದಾನೆ. ಇನ್ನೂ ಮೃತ ಫೈತಮ್ಮ ಮತ್ತು ಗೊಲ್ಲಬಾಬುಗೆ 19 ವರ್ಷದ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಫೈತಮ್ಮನ ಮಗನ ಸ್ನೇಹಿತನಾಗಿದ್ದ ಗಣೇಶ್ ಜೊತೆಗೆ ಅಕ್ರಮ ಸಂಬಂಧ ಹೊಂದಿರೋದಕ್ಕೆ ಗೊಲ್ಲಬಾಬು ಕೋಪಗೊಂಡಿದ್ದ ಎಂದು ಹೇಳಲಾಗ್ತಿದೆ.
ಇನ್ನೂ ಘಟನೆಯಲ್ಲಿ ಕೊಲೆಗಾರ ಕೂಡ ನೇಣಿಗೆ ಶರಣಾಗಿದ್ದು ಕೊಲೆಗೆ ನಿಖರ ಕಾರಣ ಕೂಡ ನಿಗೂಢವಾಗೇ ಉಳಿದಿದೆ. ಸದ್ಯ ಘಟನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
PublicNext
17/10/2024 02:18 pm