ಬೆಂಗಳೂರು: ಬೈಕ್ನಲ್ಲಿ ಮಗಳನ್ನು ಕಳುಹಿಸುವಂತೆ ಕಿರಾತಕ ಪೀಡಿಸಿದ್ದಾನೆ. ಒಪ್ಪದೇ ಇದ್ದಿದ್ದಕ್ಕೆ ತಾಯಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಾಯಿ ಮಗಳ ಮೇಲೆ ಕುಡುಗೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು,ಯಾಸಿನ್ ಎಂಬಾತನಿಂದ ತಾಯಿ ಮಗಳ ಮೇಲೆ ಪೈಶಾಚಿಕ ಕೃತ್ಯ ನಡೆದಿದೆ. ಸರ್ಜಾಪುರ ಸಮೀಪದ ಮಟ್ಟನಹಳ್ಳಿ ಬಳಿ ಘಟನೆ ನಡೆದಿದೆ.
ನಾಗಪ್ಪ ಎಂಬುವವರ ತೋಟದ ಕೆಲಸಕ್ಕೆ ಪುದಿನ ಸೊಪ್ಪು ಕೀಳಲು ತಾಯಿ ಮಗಳು ಬಂದಿದ್ದರು. ಇದೇ ಜಾಗಕ್ಕೆ ಕೆಲಸಕ್ಕೆ ಬಂದಿದ್ದ ಆರೋಪಿ ಯಾಸೀನ್ ಸೊಪ್ಪು ಕೀಳುವಾಗ ಮಗಳ ಮೇಲೆ ಕಣ್ಣು ಹಾಕಿದ್ದಾನೆ.ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಆಗಲು ತಾಯಿ ಮಗಳು ಸಿದ್ಧವಾಗಿದ್ದಾರೆ. ಆಗ ನಾನೇ ಬೈಕ್ ನಲ್ಲಿ ಬಿಡುತ್ತೇನೆ ಎಂದು ಯಾಸಿನ್ ಹೇಳಿದ್ದಾನೆ.
ಇದಕ್ಕೆ ಒಪ್ಪದೇ ಇದ್ದಾಗ ಸೊಪ್ಪು ಕೀಳಲು ತಂದಿದ್ದ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ತಾಯಿಯ ಕೈ ಮೂಗು ಹಾಗೂ ಕತ್ತಿನ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ತೋಟದ ಮಾಲೀಕರು ನೋಡಿ ತಾಯಿ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಸರ್ಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇತ್ತ ಆರೋಪಿ ಯಾಸಿನ್ ಅನ್ನು ಸರ್ಜಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
PublicNext
17/10/2024 01:26 pm