ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: “ಒಳ ಮೀಸಲಾತಿ ಜಾರಿಗೊಳಿಸದಿದ್ರೆ ಕ್ರೂರ ಹೋರಾಟ”, - ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್‌ಗೆ ದಲಿತ ಮುಖಂಡನ ಎಚ್ಚರಿಕೆ

ಚಿತ್ರದುರ್ಗ: ಚಿತ್ರದುರ್ಗ ನಗರದ ಡಿಸಿ ಸರ್ಕಲ್ ಬಳಿ ಮಾದಿಗ ಸಮುದಾಯದದಿಂದ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಬೃಹತ್ ಪ್ರತಿಭಟನೆಯನ್ನು ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಪ್ರತಿಭಟನಾ ಮೆರವಣಿಗೆಯಲ್ಲಿ ದಲಿತ ಮುಖಂಡ ಮೋಹನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. 30 ವರ್ಷಗಳಿಂದ ಮಾದಿಗರಿಗೆ ನೀವುಗಳು ಮೋಸ ಮಾಡಿದ್ದೀರಾ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಕಾಲಹರಣವನ್ನು ಮಾಡುತ್ತಿರುವುದರಿಂದ ಮಾದಿಗರ ಮೇಲೆ ನಿಮಗೆಷ್ಟು ದ್ವೇಷ ಇರಬಹುದು ಎಂದು ಗುಡುಗಿದರು.

ಕಾಂಗ್ರೆಸ್ ಸತ್ತ ಶವ ಯಾತ್ರೆಯನ್ನ ಮಾಡಿದ್ದೇವೆ. ಮುಂದೊಂದು ದಿನ ನಿಮ್ಮಗಳ ಶವ ಯಾತ್ರೆಯನ್ನು ಮಾಡುತ್ತೇವೆ. ಪ್ರಭಾವಿ ವ್ಯಕ್ತಿಗಳು ಒಳ ಮೀಸಲಾತಿಯನ್ನು ವಿರೋಧಿಸುತಿದ್ದೀರಾ, ನಿಮ್ಮನ್ನು ಬಗ್ಗು ಬಡಿಯುವುದು ನಮಗೆ ಗೊತ್ತಿದೆ ಎಂದು ಆಕ್ರೋಶದ ಮಾತುಗಳನ್ನಾಡಿದರು. ಇಂದು ಶವಯಾತ್ರೆಯನ್ನು ಮಾಡಿದ್ದೇವೆ. ಮುಂದೊಂದು ದಿನ ಕ್ರೂರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Edited By : Manjunath H D
PublicNext

PublicNext

16/10/2024 08:12 pm

Cinque Terre

32.09 K

Cinque Terre

0