ಚಿತ್ರದುರ್ಗ- ಜಾತಿ ಗಣತಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜನಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಜಾತಿ ಗಣತಿ ಬಿಡುಗಡೆಗೆ ಆಗ್ರಹಿಸಿದರು.
ಈ ವೇಳೆ ಸುದ್ದಿಗೋಷ್ಟಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಜೆ.ಯಾದವರೆಡ್ಡಿ ಮಾತ್ನಾಡಿ, ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಗಣತಿ ಬಿಡುಗಡೆ ಮಾಡುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಕೂಡಾ ಬಿಡುಗಡೆ ಮಾಡಲು ಮೀನಾಮೇಷ ಏಣಿಸುತ್ತಿದೆ. ಅಲ್ದೆ ಮೇಲ್ವರ್ಗದವರು ವಿರೋಧಿಸುತ್ತಿರುವುದು ನಿಜಕ್ಕೂ ಕೂಡಾ ಖಂಡನೀಯ ಎಂದರು. ಉದ್ದೇಶ ಪೂರ್ವಕವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಬಿಡುಗಡೆ ಮಾಡಿದ ಬಳಿಕ ಅಷ್ಟೇ ವೈಜ್ಞಾನಿಕ ಅಥವಾ ಅವೈಜ್ಞಾನಿಕ ಎಂದು ತಿಳಿಯುತ್ತದೆ ಎಂದರು. ಈ ವೇಳೆ ಮುಖಂಡರಾದ ಶಫಿವುಲ್ಲಾ, ಜಾಕೀರ್ ಹುಸೇನ್, ಮಹಮದ್ ಸಿರಾಜ್ ಸೇರಿ ಹಲವರಿದ್ದರು.
PublicNext
16/10/2024 03:11 pm