ಚಿಕ್ಕಮಗಳೂರು: ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆದ ಪರಿಣಾಮ ಮಲೆನಾಡು ಭಾಗದಲ್ಲಿ ಭೂಕುಸಿತದ ಭೀತಿ ಎದುರಾಗಿದೆ. ಕೊಪ್ಪ ತಾಲೂಕಿನ ಗುಡ್ಡೆ ತೋಟ ಗ್ರಾಮದ ವಿಶೇಷ ಚೇತನೆ ಲೀಲಾ ಎಂಬುವರ ಮನೆ ಮುಂಭಾಗದಲ್ಲಿ ಪ್ರತಿ ನಿತ್ಯ ಭೂಮಿ ಕುಸಿಯಲು ಆರಂಭಿಸಿದೆ.
ಕುಸಿತ ಹೆಚ್ಚಾದಲ್ಲಿ ಮನೆ ಬಾಗಿಲಿಗೆ ಬಂದು ನಿಲ್ಲಲಿದ್ದು ಪತಿ ಇಲ್ಲದೇ ಏಕಾಂಗಿ ಜೀವನ ನಡೆಸುತ್ತಿರುವ ಲೀಲಾ ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.
PublicNext
16/10/2024 07:34 pm