ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೂ ಕಾಫಿನಾಡಿನ ಸೌಂದರ್ಯ ಅನಾವರಣಗೊಂಡಿದೆ. ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯೇ ಇಲ್ಲ ಎಂಬಂತೆ ಸೌಂದರ್ಯ ಬಾಸವಾಗಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿಯ Z ಪಾಯಿಂಟ್ ನ ಸೌಂದರ್ಯ ಪ್ರವಾಸಿಗರ ಕಣ್ಣು ಕುಕ್ಕುತ್ತಿದ್ದು ಬೆಟ್ಟಕ್ಕೆ ಮಲ್ಲಿಗೆ ಹೂವಿನ ಮೋಡ ಹೊದಿಸಿ ಮಲಗಿದಂತೆ ಪ್ರಕೃತಿಯ ಸೌಂದರ್ಯ ಭಾಸವಾಗುತ್ತಿದೆ. ಈ ಸೌಂದರ್ಯವನ್ನು ನೋಡಿದ್ರೆ ಪ್ರಕೃತಿ ಮುಂದೆ ಜಗತ್ತಿನ ಎಲ್ಲಾ ಸೌಂದರ್ಯವೂ ನಶ್ವರ ಅನ್ನೋದಕ್ಕೆ ಕೆಮ್ಮಣ್ಣುಗುಂಡಿ ಸಾಕ್ಷಿಯಾಗಿದೆ.
PublicNext
16/10/2024 02:32 pm