ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳನ್ನ ಕೊಂದು ದಂಪತಿ ಆತ್ಮಹತ್ಯೆ - ಈ ಸಾವು ನ್ಯಾಯವೇ?

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರೋ ಘಟನೆ ನಗರದ ಹೊರಹೊಲಯದ ರಾಜನಕುಂಟೆ ಬಳಿ ನಡೆದಿದೆ. ರಾಜನಕುಂಟೆ ಠಾಣೆ ವ್ಯಾಪ್ತಿಯ ಸಿಂಗನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ.

ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಕೌಟುಂಬಿಕ ಕಲಹ ಅಥವಾ ಸಾಲದ ಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ರಾಜಾನುಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಅವಿನಾಶ್ (೩೮) , ಪತ್ನಿ ಮಮತಾ (೩೦) ಹಾಗು ಮಗಳಾದ ಅಧೀರ್ (೫) ಹಾಗೂ ಎರಡೂವರೆ ವರ್ಷದ ಮಗಳು ಅಯನ ಸಾವನ್ನಪ್ಪಿದ್ದಾರೆ.

ಮೊದಲಿಗೆ ಮಕ್ಕಳನ್ನ ಸಾಯಿಸಿ ಆ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರೊ ಶಂಕೆ ಇದೆ. ಕಲಬುರ್ಗಿ ಮೂಲದ ಕುಟುಂಬ ಕಳೆದ ಐದು ವರ್ಷಗಳಿಂದ ಸಿಂಗನಾಯಕನಹಳ್ಳಿಯಲ್ಲಿ ವಾಸವಿದ್ರು. ಅವಿನಾಶ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ಅವಿನಾಶ್ ಜೊತೆಗೆ ಸಹೋದರ ಉದಯ್ ಕೂಡ ವಾಸವಿದ್ದ. ಉದಯ್ ಊರಿಗೆ ಹೋಗಿದ್ದು ಮುಂಜಾನೆ ಮನೆಗೆ ಬಂದಾಗ ಯಾರು ಬಾಗಿಲು ಓಪನ್ ಮಾಡಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ‌. ಸದ್ಯ ರಾಜನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.

Edited By : Somashekar
PublicNext

PublicNext

14/10/2024 04:56 pm

Cinque Terre

21.42 K

Cinque Terre

2