ಶೃಂಗೇರಿ: ಶಾರದ ಪೀಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಇಂದು ನಡೆಯಲಿದೆ.
ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದ್ದು ಮಹಾರಥೋತ್ಸವದಲ್ಲಿ ಜನ ದಟ್ಟಣೆ ಇರಲಿದ್ದು, ಟ್ರಾಫಿಕ್ ಸಮಸ್ಯೆ ನಿವಾರಿಸಲು ಇಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಶೃಂಗೇರಿ ಪಟ್ಟಣಪಂಚಾಯಿತಿ ಕಚೇರಿಯಿಂದ ಕುರುಬರಕೇರಿ ವೃತ್ತದವರೆಗೆ ಎಲ್ಲಾ ರೀತಿಯ ವಾಹನಗಳ ಓಡಾಟ ಮತ್ತು ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು ಹಾಗೂ ಭಾರತೀ ಬೀದಿಯಲ್ಲಿ ಬಸ್ ಸಂಚಾರ ಇರುವುದಿಲ್ಲ. ಹೀಗಾಗಿ ಪಟ್ಟಣದ ಈ ಎರಡು ರಸ್ತೆಯನ್ನು ಹೊರತುಪಡಿಸಿ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು ವಾಹನ ನಿಲುಗಡೆ ಮಾಡಬೇಕಿದೆ.
Kshetra Samachara
13/10/2024 10:14 am