ಚಿತ್ರದುರ್ಗ: ಚಿತ್ರದುರ್ಗದ ಸಿರಿಗೆರೆ ಸರ್ಕಲ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಉತ್ತರ ಪ್ರದೇಶ ಮೂಲದ 25 ವರ್ಷದ ಮೊಹಮ್ಮದ್ ಮಾರುಫ್ ಎಂಬಾತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಮೊಹಮ್ಮದ್ ಮಾರುಫ್ ಈತನು ಮೂಲತಃ ಉತ್ತರ ಪ್ರದೇಶ ಮೂಲದವನಾಗಿದ್ದು ಬೈಕ್ ನಲ್ಲಿ ಹಳ್ಳಿಗಳಿಗೆ ತೆರಳಿ ಸಣ್ಣಪುಟ್ಟ ಪ್ಲಾಸ್ಟಿಕ್ ವಸ್ತುಗಳನ್ನ ಮಾರಾಟ ಮಾಡುತ್ತ ಜೀವನ ಸಾಗಿಸುವವನಾಗಿದ್ದು ಮಂಗಳವಾರ ರಾತ್ರಿ ದಾವಣಗೆರೆ ಕಡೆಯಿಂದ ಚಿತ್ರದುರ್ಗದ ಕಡೆ ಬರುತ್ತಿದ್ದು ಬೈಕ್ ಸಿರಿಗೆರೆ ಸರ್ಕಲ್ ಬಳಿ ಬಂದಾಗ ಬೈಕ್ ನ ಪೆಟ್ರೋಲ್ ಕಾಲಿಯಾಗಿದ್ದು ಬೈಕ್ ಅನ್ನ ಸೈಡ್ ಗೆ ನಿಲ್ಲಿಸಿ ಬಾಟಲ್ ತೆಗೆದುಕೊಂಡು ಎದುರಿನ ಪೆಟ್ರೋಲ್ ಬಂಕ್ ಗೆ ರಸ್ತೆ ದಾಟಿ ಹೋಗುತ್ತಿದ್ದು ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಮೊಹಮ್ಮದ್ ಮಾರುಫ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಇನ್ನೂ ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಭರಮಸಾಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು ಈ ಸಂಬಂಧ ಪ್ರಖರಣ ದಾಖಲಿಸಿಕೊಂಡಿದ್ದಾರೆ.
PublicNext
09/10/2024 12:02 pm