ಉಡುಪಿ : ಇಂದ್ರಾಳಿ ರೈಲ್ವೆ ಸೇತುವೆ ಬಳಿ ಕುಡಿತದ ನಶೆಯಲ್ಲಿದ್ದ ವ್ಯಕ್ತಿಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಮಗುವನ್ನು ರಕ್ಷಣೆ ಮಾಡಲಾಯಿತು.ಸ್ಥಳೀಯರಿಂದ ಮಾಹಿತಿ ಪಡೆದ ಸಮಾಜಸೇವಕರು ಮಹಿಳಾ ಪೋಲಿಸರ ಮೂಲಕ ಮಗುವನ್ನು ರಕ್ಷಿಸಿ, ಲಕ್ಷ್ಮೀನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಈ ಸಂದರ್ಭ ಮಕ್ಕಳ ರಕ್ಷಣಾ ಘಟಕದ ಪ್ರಕಾಶ್ ನಾಯ್ಕ್, ಮತ್ತು ಮನೋಜ್ ಇದ್ದರು.ರಕ್ಷಿಸಲ್ಪಟ್ಟ ಮಗುವಿಗೆ ಎರಡೂವರೆ ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದೆ. ವಿಪರೀತ ಮದ್ಯಪಾನ ಮಾಡಿರುವ ವ್ಯಕ್ತಿಯು ಮಗುವಿನ ತಂದೆ ತಾನೆಂದು, ಬೆಂಗಳೂರು ರಾಮನಗರದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ದಾಖಲೆಗಳು ಇಲ್ಲದಿರುವುದು ಮತ್ತು ನೀಡಿರುವ ವಿವರಗಳು ಅಸ್ಪಷ್ಟವಾಗಿದ್ದರಿಂದ ಮಗುವಿನ ಹೆತ್ತವರು ಯಾರೆಂದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.
PublicNext
19/09/2024 12:05 pm