ಮಂಗಳೂರು: ಶ್ರೀರಕ್ತೇಶ್ವರಿ ಮತ್ತು ಪಂಚದೇವತಾ ಸಾನಿಧ್ಯ ಶ್ರೀರಾಮನಗರ, ವಾಮಂಜೂರು ಹಾಗೂ ವಾಮಂಜೂರು ಸಾರ್ವಜನಿಕ ಶ್ರೀಶಾರದಾ ಪೂಜಾ ಸಮಿತಿಯ ವತಿಯಿಂದ ನಡೆಯುವ "ವಾಮಂಜೂರು ಶಾರದಾ ಮಹೋತ್ಸವ"ದ ಕಾರ್ಯಾಲಯ ವಾಮಂಜೂರಿನ ಬಾವ ಬಿಲ್ಡರ್ಸ್ನ ಕಟ್ಟಡದಲ್ಲಿ ಉದ್ಘಾಟನೆ ನಡೆಯಿತು.
ಅಕ್ಟೋಬರ್ 9ರಿಂದ 13ರವರೆಗೆ ವಾಮಂಜೂರಿನ ಕೇಂದ್ರ ಮೈದಾನದಲ್ಲಿ "ವಾಮಂಜೂರು ಶಾರದಾ ಮಹೋತ್ಸವ" ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾರ್ಯಾಲಯ ಉದ್ಘಾಟನೆಗೊಂಡಿತು.
ಈ ವೇಳೆ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಪ್ರಮುಖರಾದ ಚಂದ್ರಶೇಖರ ರಾಮನಗರ, ಸದಾನಂದ ಪೂಜಾರಿ, ಮೋಹನ್ ಪಚ್ಚನಾಡಿ, ರಾಕೇಶ್ ಶೆಟ್ಟಿ ಅಮೃತನಗರ, ಅಜಯ್ ಮಂಗಳನಗರ, ಬಿಪಿನ್ ವಾಮಂಜೂರು, ಗೋಪಾಲ್ ದೇವಿನಗರ, ಸುರೇಂದ್ರ ಗುರುಪುರ, ನವೀನ್ ಅಮೃತ ನಗರ, ವೆಂಕಪ್ಪ ಅಮೃತ ನಗರ, ನವೀನ್ ಶೆಟ್ಟಿ, ಸಂತೋಷ್ ನಗರ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
18/09/2024 09:59 pm