ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಂತತೆಯಿಂದ ನೆರವೇರಿದ ಗಣೇಶ್ಯೋತ್ಸವ, ಈದ್ ಮಿಲಾದ್ : ಕವಿತೆಯ ಮೂಲಕ ಮಾಧ್ಯಮಕ್ಕೆ ಧನ್ಯವಾದ ಹೇಳಿದ ಡಿಸಿಪಿ ರವೀಶ್

ಹುಬ್ಬಳ್ಳಿ: ನೀವುಗಳು ನಮ್ಮ ಇಲಾಖೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದಲೂ, ಇಲಾಖೆಯ ಕಾರ್ಯವೈಖರಿಯನ್ನು ತಮ್ಮ ಮೀಡಿಯಾದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಿದ್ದದರ ಮುಖೇನ ಜನರಲ್ಲಿ ಹೊಸ ಭಾವವನ್ನು ಬಿತ್ತಿದುದರ ಪರಿಣಾಮ ಹುಬ್ಬಳ್ಳಿ - ಧಾರವಾಢ ನಗರಗಳ ವ್ಯಾಪ್ತಿಯಲ್ಲಿ ಶ್ರೀ ಗಣೇಶೋತ್ಸವವೂ, ಈದ್ ಮಿಲಾದ್ ಹಬ್ಬದ ಉತ್ಸವವೂ ಯಾವುದೇ ಸಮಸ್ಯೆಗಳಿಲ್ಲದೆ ನಿರಾತಂಕವಾಗಿ ಸಂಪನ್ನಗೊಂಡಿದೆ. ಆದ್ದರಿಂದ ತಮಗೆಲ್ಲರಿಗೂ ನನ್ನ ವೈಯ್ಯಕ್ತಿಕವಾಗಿ ವಂದನೆಗಳನ್ನು ಸಲ್ಲಿಸಲಿಷ್ಟಪಡುತ್ತೇನೆ.

ಕವಿ ಅಡಿಗರು ತಮ್ಮ ಕವನದಲ್ಲಿ

ಕಟ್ಟುವೆವು ನಾವು ಹೊಸನಾಡೊಂದನು,

ರಸದ ಬೀಡೊಂದನು.

ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,

ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,

ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ

ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ

ಕಟ್ಟುವೆವು ನಾವು ಹೊಸ ನಾಡೊಂದನು !

ಎನ್ನುವ ಕವಿಮನಸಿನ ಆಶಯದಂತೆ ಈ ಹುಬ್ಬಳ್ಳಿ ಧಾರವಾಢ ನಗರಗಳನ್ನು ಕಟ್ಟೋಣ. ನಿಮ್ಮಗಳ ಸಹಕಾರ ಎಂದೆಂದಿಗೂ ಹೀಗೆ ಇರಲಿ.

ಮತ್ತೊಮ್ಮೆ ತಮಗೆಲ್ಲರಿಗೂ ಧನ್ಯವಾದಗಳು.

Edited By : Abhishek Kamoji
Kshetra Samachara

Kshetra Samachara

18/09/2024 01:14 pm

Cinque Terre

11.6 K

Cinque Terre

2

ಸಂಬಂಧಿತ ಸುದ್ದಿ