ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಭಜನೆಯೊಂದಿಗೆ ಗಣಪನಿಗೆ ವಿದಾಯ ಹೇಳಿದ ದೇಸಾಯಿ ಪೇಟೆ ಜನತೆ

ನವಲಗುಂದ: ನಗರದ ಪ್ರತಿ ಕಡೆಗಳಲ್ಲಿ ಗಣೇಶನ ಹಬ್ಬ ಬಂತೆಂದರೆ ಸಾಕು ಯುವಕರ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ. ಅದರಲ್ಲೂ ಗಣಪನ ವಿಸರ್ಜನೆ ವೇಳೆಗೆ ಡಿಜೆ ಹಚ್ಚಿ ಕುಣಿದು ಕುಪ್ಪಳಿಸುವರು. ಆದರೆ ಇಲ್ಲೊಂದು ಓಣಿ ಮಾತ್ರ ಭಜನೆ ಮಾಡುತ್ತಾ ಗಣಪನಿಗೆ ವಿದಾಯ ಹೇಳಿದ್ದು ವಿಶೇಷ.

ಹೌದು...ಪಟ್ಟಣದ ದೇಸಾಯಿ ಪೇಟೆಯ ಜಯವಾಹಿನಿ ಯುವಕ ಮಂಡಳ ಡಿಜೆ ಹಚ್ಚಿ ಹಣ ವ್ಯರ್ಥ ಮಾಡದೇ ಹಳೆಯ ಪದ್ಧತಿಯಂತೆ ಭಜನೆ ಮಾಡುತ್ತ ಗಣೇಶನ ಮೆರವಣಿಗೆ ಮಾಡಿದರು. ವಿಶೇಷವಾಗಿ ಈ ರೀತಿ ಗಣೇಶನ ವಿಸರ್ಜನೆ ಮಾಡಿದ್ದು ಎಲ್ಲರಿಗೂ ಮಾದರಿಯದಂತಿದೆ.

ಇನ್ನೂ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ಹಿರಿಯರಾದ ರಾಯನಗೌಡ ಪಾಟೀಲ, ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ, ಉಮೇಶ ಹಂಚಿನಾಳ, ಮಹಾಂತೇಶ ಗೌರಿಮಠ ಸೇರಿದಂತೆ ಜಯವಾಹಿನಿ ಯುವಕ ಮಂಡಳ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

15/09/2024 06:54 pm

Cinque Terre

10.66 K

Cinque Terre

1

ಸಂಬಂಧಿತ ಸುದ್ದಿ