ನವಲಗುಂದ: ಪಟ್ಟಣದ ವಿನಾಯಕ ಪೇಟೆಯ ಇತಿಹಾಸ ಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಅಂಗವಾಗಿ ವೈಶಿಷ್ಟ್ಯ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಒಂಬತ್ತು ದಿನಗಳ ಕಾಲ ಪಂಚಲೋಹದ ಗಣೇಶ ಮೂರ್ತಿಯ ಮೆರವಣಿಗೆ ನಡೆಯಿತು.
ಇನ್ನೂ ವಾಹನೋತ್ಸವದ ಕೊನೆಯ ದಿನವಾದ ಇಂದು ಕಮಲ ವಾಹನ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದಿಂದ ಪ್ರಾರಂಭಗೊಂಡು ಗಾಂಧಿ ಮಾರುಕಟ್ಟೆಯ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಹಿಂದಿನ ಕಾಲದಂತೆ ಪಂಜಿನ ಬೆಳಕಿನ ಮೂಲಕ ನಗರದ ಗುರು ಹಿರಿಯರು, ಯುವಕರು ಸೇರಿ ಮಹಿಳೆಯರು ಆರತಿ ಹಿಡಿದು ಮೆರವಣಿಗೆಗೆ ಮೆರಗು ತಂದರು.
Kshetra Samachara
14/09/2024 08:43 pm